ಬೆಂಗಳೂರು: 500, 2000 ರೂ ಹೊಸ ನೋಟುಗಳನ್ನು ಬ್ಯಾಂಕ್ ಗೆ ಸಾಗಿಸುತ್ತಿದ್ದ ಚಾಲಕ 1.37 ಕೋಟಿ ರೂಪಾಯಿ ಸಮೇತ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ನಡೆದಿದೆ.
ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಹಣವನ್ನು ಕೊಂದೊಯ್ಯುತ್ತಿದ್ದ ವ್ಯಾನ್ ಇದಾಗಿದ್ದು, ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಕೆಳಗಿಳಿಯುತ್ತಿದ್ದಂತೆಯೇ ಚಾಲಕ ಹಣದ ಸಮೇತ ಪರಾರಿಯಾಗಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಶಿಸಿದ್ದು, ಪರಾರಿಯಾಗಿರುವ ಚಾಲಕ ಹಾಗೂ ವಾಹನ ಬೆಂಗಳುರು ನಗರ ಬಿಟ್ಟು ಹೊರಹೋಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಬ್ಯಾಂಕ್ ಗಳಿಗೆ ಹಣ ಸಾಗಿಸುತ್ತಿದ್ದ ವ್ಯಾನ್ ಲಾಜಿಕ್ಯಾಶ್ ಎಂಬ ಖಾಸಗಿ ಸಂಸ್ಥೆಗೆ ಸೇರಿದ್ದು, ಕೊಟಕ್ ಮಹೇಂದ್ರ ಬ್ಯಾಂಕ್ ಸೇರಿ ಹಲವು ಬ್ಯಾಂಕ್ ಗಳಿಗೆ ಸಾಗಿಸಬೇಕಾಗಿದ್ದ ಒಟ್ಟು 1.37 ಕೋಟಿ ಹಣ ವ್ಯಾನ್ ನಲ್ಲಿತ್ತು ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
Comments are closed.