ಬೆಂಗಳೂರು: ಫೆಬ್ರವರಿಯಿಂದ – ಎಪ್ರಿಲ್ ವರೆಗೆ ಸುಮಾರು ಎರಡೂವರೆ ತಿಂಗಳುಗಳ ಕಾಲ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಭಾಗಶಃ ಮುಚ್ಚಲಿದೆ.
ಬೆಳಗ್ಗೆ 10.30 ರಿಂದ ಸಂಜೆ ಐದು ಗಂಟೆವರೆಗೆ ಭಾಗಶಃವಾಗಿ ರನ್ ವೇ ಮುಚ್ಚಲಾಗುವುದು ಎಂದು ಹೇಳಲಾಗಿದೆ. ರನ್ ವೇ ಇಂದ ಶೀಘ್ರವಾಗಿ ತೆರಳಲು ಟ್ಯಾಕ್ಸಿಗೆ ರಸ್ತೆ ಮಾಡುವ ಕಾಮಗಾರಿ ಆರಂಭವಾಗಲಿದೆ . ಹೀಗಾಗಿ ಫೆಬ್ರವರಿ 19 ರಿಂದ ಏಪ್ರಿಲ್ 30 ರವರೆಗೆ ರನ್ ವೇ ಭಾಗಶಃ ಮುಚ್ಚಲಿದೆ.
2008 ರಿಂದ ಇದು ಎರನೇ ಬಾರಿಗೆ ರನ್ ವೇ ಮುಚ್ಚಲಾಗುತ್ತಿದೆ. ಈ ಮೊದಲು 2012 ರಲ್ಲಿ ಮಾರ್ಚ್ 11ರಿಂದ ಏಪ್ರಿಲ್ 3 ರವರೆಗೆ ಮುಚ್ಚಲಾಗಿತ್ತು. ಈ ಬಗ್ಗೆ ಮಾಹಿತಿ ಕೇಳಲು ವಿಮಾನ ನಿಲ್ದಾಣ ಪ್ರಾಧಿಕಾರಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಶೀಘ್ರವೇ ಈ ಸಂಬಂಧ ಪ್ರಕಟಣೆ ಹೊರಡಿಸುವುದಾಗಿ ತಿಳಿಸಿದ್ದಾರೆ.
Comments are closed.