ಕರ್ನಾಟಕ

ಫೆಬ್ರವರಿಯಿಂದ – ಎಪ್ರಿಲ್ ವರೆಗೆ ಭಾಗಶಃ ಮುಚ್ಚಲಿದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‏ವೇ

Pinterest LinkedIn Tumblr

bang

ಬೆಂಗಳೂರು: ಫೆಬ್ರವರಿಯಿಂದ – ಎಪ್ರಿಲ್ ವರೆಗೆ ಸುಮಾರು ಎರಡೂವರೆ ತಿಂಗಳುಗಳ ಕಾಲ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‏ವೇ ಭಾಗಶಃ ಮುಚ್ಚಲಿದೆ.

ಬೆಳಗ್ಗೆ 10.30 ರಿಂದ ಸಂಜೆ ಐದು ಗಂಟೆವರೆಗೆ ಭಾಗಶಃವಾಗಿ ರನ್ ವೇ ಮುಚ್ಚಲಾಗುವುದು ಎಂದು ಹೇಳಲಾಗಿದೆ. ರನ್ ವೇ ಇಂದ ಶೀಘ್ರವಾಗಿ ತೆರಳಲು ಟ್ಯಾಕ್ಸಿಗೆ ರಸ್ತೆ ಮಾಡುವ ಕಾಮಗಾರಿ ಆರಂಭವಾಗಲಿದೆ . ಹೀಗಾಗಿ ಫೆಬ್ರವರಿ 19 ರಿಂದ ಏಪ್ರಿಲ್ 30 ರವರೆಗೆ ರನ್ ವೇ ಭಾಗಶಃ ಮುಚ್ಚಲಿದೆ.

2008 ರಿಂದ ಇದು ಎರನೇ ಬಾರಿಗೆ ರನ್ ವೇ ಮುಚ್ಚಲಾಗುತ್ತಿದೆ. ಈ ಮೊದಲು 2012 ರಲ್ಲಿ ಮಾರ್ಚ್ 11ರಿಂದ ಏಪ್ರಿಲ್ 3 ರವರೆಗೆ ಮುಚ್ಚಲಾಗಿತ್ತು. ಈ ಬಗ್ಗೆ ಮಾಹಿತಿ ಕೇಳಲು ವಿಮಾನ ನಿಲ್ದಾಣ ಪ್ರಾಧಿಕಾರಿದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಶೀಘ್ರವೇ ಈ ಸಂಬಂಧ ಪ್ರಕಟಣೆ ಹೊರಡಿಸುವುದಾಗಿ ತಿಳಿಸಿದ್ದಾರೆ.

Comments are closed.