ಕರ್ನಾಟಕ

ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಪೋಷಕರ ಮಗಳ ಮೇಲೆ ಹರಿದ ಜೆಸಿಬಿ: ಬಾಲಾಕಿ ಸಾವು

Pinterest LinkedIn Tumblr

childಬೆಂಗಳೂರು(ಅ.30): ನಾಲ್ಕು ವರ್ಷದ ಬಾಲಕಿ ಮೇಲೆ ಜೆಸಿಬಿ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ಮಹದೇವಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕಿ ಕೋಲಾರ ಮೂಲದ ಹನುಮಂತ ಹಾಗೂ ಲಕ್ಷಿದೇವಿಯವರ ಪುತ್ರಿ ಎನ್ನಲಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮೃತ ಮಗುವಿನ ಪೋಷಕರು ಕೆರೆ ನಿರ್ಮಾಣ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ನಿನ್ನೆ ಮಗು ಮರದ ಕೆಳಗೆ ಮಲಗಿದ್ದ ಸಮಯದಲ್ಲಿ ಚಾಲಕನ ಬೇಜವಾಬ್ದಾರಿಯಿಂದ ಕುಡಿದ ಅಮಲಿನಲ್ಲಿ ಮಗುವಿನ ಮೇಲೆ ಜೆಸಿಬಿ ಹರಿಸಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಇನ್ನು ಮೃತ ಬಾಲಕಿ ದೇಹವನ್ನು ಬೋರಿಂಗ್ ಶವ ಸಂಸ್ಕಾರಕ್ಕೆ ಕಳಿಸಲಾಗಿದ್ದು, ಪೋಷಕರ ಅಕ್ರಂದನ ಮುಗಿಲು ಬಿಟ್ಟಿದೆ.

Comments are closed.