ಕರ್ನಾಟಕ

ಬಿಜೆಪಿ ವಿರುದ್ಧ ಅವಮಾನಕರ ಲೇಖನ ಪ್ರಕಟಕ್ಕಾಗಿ ಗೌರಿ ಲಂಕೇಶ್ ಬಂಧನ

Pinterest LinkedIn Tumblr

gauri_lankesh_pi

ಹುಬ್ಬಳ್ಳಿ, ಅ.1: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹುಬ್ಬಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಎರಡನೆ ಜೆಎಮ್‍ಎಫ್‍ಸಿ ಕೋಟ್೯ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಗೌರಿ ಲಂಕೇಶ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಕುರಿತು ಅವಮಾನಕರ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಸಂಸದ ಪ್ರಹ್ಲಾದ ಜೋಶಿ ಅವರು ಗೌರಿ ಲಂಕೇಶ್ ಅವರ ವಿರುದ್ಧ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಅವರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಕಾರಣ ಬಂಧನದ ವಾರೆಂಟ್ ಜಾರಿಯಾಗಿತ್ತು ಎನ್ನಲಾಗಿದೆ.

ಗೌರಿ ಲಂಕೇಶ್ ಅವರನ್ನು ಬಂಧಿಸಿದ ಪೊಲೀಸರು ಎರಡನೆ ಜೆಎಮ್‍ಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೃಪೆ : ವಾಭಾ

Comments are closed.