ಕರ್ನಾಟಕ

ಜೋಡಿಗಳ ನಡುವಿನ ಮನಸ್ತಾಪ – ಅತ್ಮಹತ್ಯೆಯಲ್ಲಿ ಅಂತ್ಯ ಕಂಡುಕೊಂಡ ಮಹಿಳೆ

Pinterest LinkedIn Tumblr

susaid_fair_pic

ತಿರುವನಂತಪುರ : ಇಲ್ಲಿನ ಚಂದಾಯಮಂಗಲಂ ನ ಕರಮಣ ಎಂಬಲ್ಲಿ ಎರಡು ಮಹಡಿಗಳ ಅಪಾರ್ಟ್ಮೆಂಟ್ ಕಟ್ಟಡದ ಮೊದಲ ಮಹಡಿಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 32 ವರ್ಷ ಪ್ರಾಯದ ಮಾಯಾ ಅಲಿಯಾಸ್ ಮಂಜು ಎಂಬಾಕೆಯ ಸುಟ್ಟು ಕರಕಲಾದ ದೇಹ ಪತ್ತೆಯಾಗಿದೆ.

ಕರಮಣ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ಅಳಂಕಳ ಎಂಬಲ್ಲಿನ ಕೃಷ್ಣ ನಗರದ ಪದ್ಮಿನಿ ಅಮ್ಮ ಎಂಬವರ ಒಡೆತನಕ್ಕೆ ಸೇರಿರುವ 2 ಮಹಡಿಗಳ ಅಪಾರ್ಟ್ಮೆಂಟ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಮಾಯಾ ಅಲಿಯಾಸ್ ಮಂಜು ಎಂಬಾಕೆಯ ಸುಟ್ಟು ಕರಕಲಾದ ದೇಹವು ಪತ್ತೆಯಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಮಾಯಾ ಅವರ ಮೃತ ದೇಹ ಪತ್ತೆಯಾದ ಸಂದರ್ಭದಲ್ಲಿ ಆಕೆಯ ಲಿವ್ ಇನ್ ಸಂಗಾತಿ ಜಯಶಂಕರ್ ಮನೆಯಲ್ಲಿ ಇರಲಿಲ್ಲ . ಆತ ಕೆಲವು ದಿನಗಳ ಹಿಂದೆಯೇ ಅನಾರೋಗ್ಯ ಪೀಡಿತೆಯಾಗಿರುವ ತನ್ನ ತಾಯಿಯನ್ನು ಕಾಣುವ ನೆಪದಲ್ಲಿ ತನ್ನ ಊರಿಗೆ ಹೋಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಈ ಜೋಡಿ ಕಳೆದ ಎರಡು ತಿಂಗಳಿಂದ ವಾಸವಾಗಿತ್ತು. ಇವರಿಗೆ ಈ ಹಿಂದೆ ಬೇರೆಯವರ ಜತೆಗೆ ಪ್ರತ್ಯೇಕವಾಗಿ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ ಎಂದು ಘಟನೆಯ ತನಿಖೆ ನಡೆಸುತ್ತಿರುವ ಕರಮಣ ಪೊಲೀಸ್ ಠಾಣೆಯ ಅಧಿಕಾರಿ ಕೆ ಶ್ಯಾಮ ಹೇಳಿದ್ದಾರೆ.

ಇಂದು ಶುಕ್ರವಾರ ಜಯಶಂಕರ್ ಊರಿನಿಂದ ಮರಳಿ ಬಂದವನು ಇಲ್ಲಿನ ಬಾಡಿಗೆ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ಮಾಯಾ ಅವರ ಮೃತ ದೇಹ ಸುಟ್ಟು ಕರಕಾಲಾಗಿ ಬಿದ್ದಿರುವುದನ್ನು ಕಂಡು ಹೌಹಾರಿ ಮನೆಯಿಂದ ಹೊರಗೋಡಿದ.

ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ಪ್ರಕಾರ ಜಯಶಂಕರ್ ಮತ್ತು ಮಾಯಾ ಗೆ ಆಗೀಗ ಎಂಬಂತೆ ಮಾತಿನ ಜಗಳ ಉಂಟಾಗುತ್ತಿತ್ತು. ಕೆಲ ದಿನಗಳ ಹಿಂದೆ ಇವರಿಬ್ಬರಲ್ಲಿ ಯಾವುದೋ ವಿಷಯದಲ್ಲಿ ವಿವಾದ ಉಂಟಾಗಿ ಮಾತಿನ ಜಗಳ ತೀವ್ರವಾಗಿದ್ದು ಮಾಯಾ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಎಸ್‌ಐ ಶ್ಯಾಮ ಹೇಳಿದ್ದಾರೆ.

ಕಳೆದ ಎರಡು ತಿಂಗಳಿಂದ ಈ ಮನೆಯಲ್ಲಿ ಈಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸವಾಗಿದ್ದ ವ್ಯಾನ್ ಡ್ರೈವರ್ ಜಯಶಂಕರ್ ಎಂಬಾತ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಂದಾಯ ಉಪ ವಿಭಾಗೀಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ಶವದ ಮಹಜರು ನಡೆಸಲಾಗಿದೆ. ಅನಂತರ ಮೃತ ದೇಹವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್‌ಐ ಹೇಳಿದ್ದಾರೆ.

Comments are closed.