ಕರ್ನಾಟಕ

ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಎಸಗಿದ ಮೂವರ ಬಂಧನ

Pinterest LinkedIn Tumblr

poಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದ ಅಭ್ಯರ್ಥಿ ಸೇರಿ ಇಬ್ಬರು ಶಿಕ್ಷಕರು ಪೊಲೀಸರು ಬಂಧಿಸಿದ್ದಾರೆ.

ಅಭ್ಯರ್ಥಿ ಸುನೀಲ್ ಕುಮಾರ್ ಹಾಗೂ ಶಿಕ್ಷಕರಾದ ಕೆಎಂ ಉಮೇಶ, ಸಿಆರ್ ಮಂಜುನಾಥ್ ಬಂಧಿತರಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು ಎಂದು ತಿಳಿದುಬಂದಿದೆ.

ಕೆ ಆರ್ ನಗರದ ಹನಸೋಗೆ ಮೂಲದವರಾದ ಕೆಎಂ ಉಮೇಶ ಹಾಗೂ ಸಿಆರ್ ಮಂಜುನಾಥ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿ ಸುನೀಲ್‌ ಕುಮಾರ್ ಹೆಸರಿನಲ್ಲಿ ಈತನ ಸ್ನೇಹಿತ ಶಿಕ್ಷಕ ಉಮೇಶ್ ಪರೀಕ್ಷೆ ಬರೆದಿದ್ದು, ಈ ಸಂಬಂಧ ಸುನೀಲ್ ಕುಮಾರ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದ.

ಆದರೆ ಅನಕ್ಷರಸ್ಥರಾದ ಸುನೀಲ್‌ ಕುಮಾರ್‌ ಮೊದಲ ಸ್ಥಾನ ಗಳಿಸಿದ ಬಗ್ಗೆ ಅನುಮಾನಗೊಂಡ ಇತರ ಅಭ್ಯರ್ಥಿಗಳು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು.

ಸದ್ಯ ಈ ಕುರಿತು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

FacebookTwitterGoogle Gmail

Write A Comment