ಕರ್ನಾಟಕ

ಪ್ರಿಯತಮೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

Pinterest LinkedIn Tumblr

suicide

ಮೈಸೂರು, ನ.23- ಪ್ರಿಯತಮೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ನಡೆಯುತ್ತಿರುವ ವಿಚಾರ ತಿಳಿದು ಆಕೆ ಮನೆ ಬಳಿಗೆ ಬಂದ ಪ್ರೇಮಿ ವಿಷ ಸೇವಿಸಿರುವ ಘಟನೆ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಟ್ಟಗಳ್ಳಿ ವಾಸಿ ಅಮೃತ್ ವಿಷ ಸೇವಿಸಿರುವ ಲಿಂಗಾಂಬುದಿಪಾಳ್ಯವಾಸಿ ರಾಣಿ ಹಾಗೂ ಅಮೃತ್ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಈ ವಿಚಾರ ರಾಣಿ ಮನೆಗೆಯವರಿಗೆ ತಿಳಿದಿದೆ.

ಎಂಎ ವ್ಯಾಸಂಗ ಮಾಡುತ್ತಿದ್ದ ರಾಣಿಗೆ ಕಾಲೇಜು ಬಿಡಿಸಿದ ಪೋಷಕರು ಗಿರಿಯಾಪೋವಿಪಾಳ್ಯದ ಯುವಕನೊಂದಿಗೆ ವಿವಾಹ ನಿಶ್ಚಯ ಮಾಡಿದ್ದಾರೆ. ನಿನ್ನೆ ನಿಶ್ಚಿತಾರ್ಥ ನಡೆದಿದ್ದು, ಈ ವಿಚಾರವನ್ನು ಪ್ರಿಯತಮೆಯಿಂದ ಅರಿತ ಅಮೃತ್ ರಾಣಿ ಮನೆಗೆ ಬಂದು ಆಕೆಯ ಪೋಷಕರ ಬಳಿ ತನಗೇ ಕೊಟ್ಟು ಮದುವೆ ಮಾಡುವಂತೆ ವಿನಂತಿಸಿದ್ದಾನೆ. ಇದಕ್ಕೆ ಪೋಷಕರು ಒಪ್ಪಿಲ್ಲ.

ಇದರಿಂದ ಮನನೊಂದ ಪ್ರೇಮಿ ಅಲ್ಲೇ ವಿಷ ಸೇವಿಸಿದ್ದಾನೆ. ಇದನ್ನು ಅರಿತ ಯುವತಿಯ ಪೋಷಕರು ಆತನನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆನಂತರ ಮನೆಯಲ್ಲಿ ಈಗಾಗಲೇ ನಿಶ್ಚಯವಾಗಿರುವ ಯುವಕನೊಂದಿಗೆ ಮಗಳ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ. ಪ್ರೇಮಿ ವಿಷ ಸೇವಿಸಿರುವ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮಿಯ ಸ್ಥಿತಿ ಚಿಂತಾಜನಕವಾಗಿದ್ದು, ಆತ ಚೇತರಿಸಿಕೊಂಡ ನಂತರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Write A Comment