ಕರ್ನಾಟಕ

ಮತ ಚಲಾಯಿಸಲು 45 ನಿಮಿಷ ಕಾದು ನಿಂತ ಸಚಿವ ಅಂಬರೀಷ್‌

Pinterest LinkedIn Tumblr

ambi

ಮಂಡ್ಯ: ಬೆಂಗಳೂರಿನಲ್ಲಿ ಅಭಿಮಾನಿಗಳ ಜತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂದು ಬೆಳಿಗ್ಗೆ ಬೇಗನೆ ಸ್ವಗ್ರಾಮಕ್ಕೆ ಆಗಮಿಸಿದ್ದ ಸಚಿವ ಅಂಬರೀಷ್‌ ಮತ ಚಲಾಯಿಸಲು ಅರ್ಧಗಂಟೆಗೂ ಹೆಚ್ಚು ಕಾಲ ಕಾಯ್ದ ಘಟನೆ ಶುಕ್ರವಾರ ನಡೆದಿದೆ.

ಮೇ 29ರಂದು ಅಂಬರೀಷ್‌ ಅವರ ಹುಟ್ಟುಹಬ್ಬ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವುದಕ್ಕಾಗಿ ಸ್ವಗ್ರಾಮವಾದ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಗೆ ಬೆಳಿಗ್ಗೆ 6.15ಕ್ಕೆ ಆಗಮಿಸಿದ್ದರು. 7 ಗಂಟೆಗೆ ಮತದಾನ ಆರಂಭವಾಗುವವರೆಗೂ ಕಾಯ್ದಿದ್ದು, ಮೊದಲ ಮತದಾರರಾಗಿ ಮತ ಚಲಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಲು ಬೆಂಗಳೂರಿನ ಮನೆಯ ಮುಂದೆ ಕಾಯ್ದಿರುತ್ತಾರೆ. ಬೇಗನೆ ಹೋಗಬೇಕು ಎಂಬ ಕಾರಣಕ್ಕೆ ಬೇಗನೆ ಬಂದಿದ್ದೇನೆ

Write A Comment