ಕರ್ನಾಟಕ

ಸಿದ್ದರಾಮಯ್ಯ ನೆನಪಿರಲಿ, ನಿಮ್ಮನ್ನು ಬೆಳೆಸಿದ ಪಕ್ಷ ಜೆಡಿಎಸ್: ಕುಮಾರಸ್ವಾಮಿ

Pinterest LinkedIn Tumblr

kumaraswamy274a

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮನ್ನು ಬೆಳೆಸಿದ್ದು ಜೆಡಿಎಸ್ ಪಕ್ಷ. ಬೆಳೆಸಿದ ಪಕ್ಷದ ನಿಂದನೆ ಸರಿಯಲ್ಲ. ಅತ್ತಿದ ಏಣಿಯನ್ನು ತಳ್ಳದಿರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ.ಕುಮಾರ ಸ್ವಾಮಿ ಗುರುವಾರ ಹೇಳಿದ್ದಾರೆ.

ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು,ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ನೆನಪಿರಲಿ ನಿಮ್ಮನ್ನು ಬೆಳೆಸಿದ ಪಕ್ಷ ಜೆಡಿಎಸ್, ನೀವು ಹತ್ತಿದ ಏಣಿಯನ್ನೇ ಒದೆಯಬೇಡಿ. ನಮ್ಮ ಪಕ್ಷಕ್ಕೆ ಒಂದು ಸರ್ಕಾರವನ್ನು ಕೆಡವಿಹಾಕುವ ಶಕ್ತಿಯಿದೆ.

ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ನಿಮಗಿಲ್ಲ. ಜೆಡಿಎಸ್ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದೆ. ಆದರೆ, ನಿಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ ದನಿ ಇಲ್ಲದವರ ದನಿ ಎಂದು ಹೇಳುತ್ತಾ, ಅಮಾಯಕರ ಮನೆ ಹೊಡೆದು ಹಾಕುತ್ತಿದ್ದಾರೆ. ಇಲ್ಲಿ ಅಂತಹ ದನಿ ಇಲ್ಲದವರ ಬಗೆಗಿನ ಕಾಳಜಿ ಎಲ್ಲಿಯೂ ಕಾಣುತ್ತಿಲ್ಲ ಎಂದು ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

Write A Comment