ಕರ್ನಾಟಕ

ಕಾನ್‌ಸ್ಟೆಬಲ್ ಹುದ್ದೆ ಪರೀಕ್ಷೆ ಉತ್ತರ ಪತ್ರಿಕೆ ಬಯಲು ಪ್ರಕರಣ: ಪ್ರಮುಖ ಆರೋಪಿ ಸೆರೆ: ರೂ 73 ಲಕ್ಷ ವಶ

Pinterest LinkedIn Tumblr

pvec28klb502

ಕಲಬುರ್ಗಿ: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿ­ಸಿದಂತೆ ಪ್ರಮುಖ ಆರೋಪಿ ಯನ್ನು ಗುರುವಾರ ಬಂಧಿಸಿರುವ ಪೊಲೀಸರು, ಆತನಿಂದ ₨ 73 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಂಚ­ನಾಳ ಗ್ರಾಮದ ಸಿದ್ದಣ್ಣ ಹಣ­ಮಂತ­ರಾಯ ದೇವದುರ್ಗ ಬಂಧಿತ. ಈತ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಾದಗೊಂಡನಹಳ್ಳಿಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾ­ಯತ್ ರಾಜ್ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಂದ ಒಟ್ಟು ₨ 73,03,500 ನಗದು ವಶಪಡಿ­ಸಿಕೊಳ್ಳ­ಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಣ್ಣ­ನನ್ನು ಗುರುವಾರ ಬಂಧಿಸಲಾಗಿದೆ. ಇನ್ನೂ ಹಲವು ಆರೋಪಿಗಳ ಕೈವಾಡ  ಇರುವ ಶಂಕೆ ಇದೆ. ಬೆಂಗಳೂರು ಮೂಲದ ಇಬ್ಬರು ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಕೊಟ್ಟಿದ್ದು, ತಾನು ಬೇರೆಯವರಿಗೆ ಅವುಗಳನ್ನು ಮಾರಾಟ ಮಾಡಿರುವುದಾಗಿ ಸಿದ್ದಣ್ಣ ಒಪ್ಪಿ ಕೊಂಡಿ­ದ್ದಾನೆ’ ಎಂದು ತಿಳಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಬ್ಬಿನ ಹೊಲದಲ್ಲಿ ಕಂತೆ ಕಂತೆ ಹಣ!: ‘ಹಂಚನಾಳ ಗ್ರಾಮದ ಕಬ್ಬಿನ ಹೊಲದಲ್ಲಿ ಈತ ಹಣವನ್ನು ಬಚ್ಚಿ ಟ್ಟಿದ್ದ. ಒಂದು ಸಾಲಿನಲ್ಲಿ ₨ 2 ಲಕ್ಷ, ಮತ್ತೊಂದು ಸಾಲಿನಲ್ಲಿ ₨ 5 ಲಕ್ಷ, ಇನ್ನೊಂದೆಡೆ ₨ 10 ಲಕ್ಷ,ಹೀಗೆ ಬೇರೆ ಬೇರೆ ಜಾಗದಲ್ಲಿ ಬರೋಬ್ಬರಿ ₨ 73,03,500 ಇರಿಸಿದ್ದ.

Write A Comment