ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಕರಾವಳಿ ಭಾಗದಲ್ಲಿ ಗಾಳಿಯ ಸಹಿತ ಮಳೆಯಾಗುತ್ತಿದ್ದು ಗುರುವಾರ ಮುಂಜಾನೆ ಜಿಲ್ಲೆಯ ತೆಕ್ಕಟ್ಟೆ ಭಾಗದಲ್ಲಿ ಬೀಸಿದ ಭಾರೀ ಗಾಳಿಗೆ ದೇವಸ್ಥಾನವೊಂದರ ವಿಶ್ರಾಂತಿ ಕೊಠಡಿ ಮೇಲ್ಮಾಡು ಹಾನಿಯಾಗಿದೆ.
ತೆಕ್ಕಟ್ಟೆ ಸಮೀಪದ ಮಾಲಾಡಿಯ ಬ್ರಹ್ಮಲಿಂಗೇಶ್ವರ ಹಾಗೂ ನಂದಿಕೇಶ್ವರ ಪರಿವಾರ ದೈವಸ್ಥಾನದ ಗುಡಿಯ ವಿಶ್ರಾಂತಿ ಕೊಠಡಿಯ ಮೇಲ್ಮಾಡು ಹಾರಿಹೋಗಿದೆ. ಕೊಠಡಿಯ ತಗಡಿನ ಮಾಡು ಸಂಪೂರ್ಣ ಕಿತ್ತು ಹಾರಿ ಹೋಗಿದೆ. ನಸುಕಿನ ವೇಳೆಯಾದ್ದರಿಂದ ಜನರ ಓಡಾಟವಿಲ್ಲದ ಹಿನ್ನೆಲೆ ಸಾವು-ನೋವು ಸಂಭವಿಸಿಲ್ಲ. ಘಟನೆಯಿಂದ ಸುಮಾರು 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ತೆಕ್ಕಟ್ಟೆ ಗ್ರಾಮಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments are closed.