ಕರಾವಳಿ

ಯುವ ಮೆರಿಡಿಯನ್ ಬೇ ರೆಸಾರ್ಟ್ ಹಾಗೂ ಕನ್ವೆನ್ಶನ್ ಸೆಂಟರ್‌ಗೆ ‘ಟೈಮ್ಸ್ ಬಿಸಿನೆಸ್ ಅವಾರ್ಡ್ 2021′

Pinterest LinkedIn Tumblr

ಕುಂದಾಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕುಂದಾಪುರ ತಾಲೂಕಿನ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ ಹಾಗೂ ಕನ್ವೆನ್ಷನ್ ಸೆಂಟರ್‌ಗೆ ‘ಟೈಮ್ಸ್ ಬಿಸಿನೆಸ್ ಅವಾರ್ಡ್ 2021 ಅತ್ಯುತ್ತಮ ಐಷಾರಾಮಿ ಹೊಟೇಲ್’ ಎನ್ನುವ ಪ್ರಶಸ್ತಿ ಲಭಿಸಿದೆ.

ಬಿಸಿನೆಸ್ ಅವಾರ್ಡ್ 2021 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯುವ ಮೆರಿಡಿಯನ್ ಆಡಳಿತ ನಿರ್ದೇಶಕರಾದ ಉದಯ ಕುಮಾರ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ ಅವರಿಗೆ ಹಿಂದಿ ನಟ, ನಿರ್ಮಾಪಕ ಸುನಿಲ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.

ಕೋಟೇಶ್ವರ-ಹಾಲಾಡಿ ರಸ್ತೆಯ ಪಾರ್ಶ್ವದಲ್ಲಿ 2012ರಲ್ಲಿ ಸುಸಜ್ಜಿತ ವ್ಯವಸ್ಥೆಗಳುಳ್ಳ ಯುವ ಮೆರಿಡಿಯನ್ ಆರಂಭಗೊಂಡಿತ್ತು. 1,200 ಮಂದಿ ಕುಳಿತುಕೊಳ್ಳಬಹುದಾದ ಸಭಾಭವನ, 500 ಆಸನ ಸಾಮರ್ಥ್ಯದ ಮಿನಿಹಾಲ್, 3,000 ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದಾದ ಒಪೇರಾ ಪಾರ್ಕ್ ಹಾಗೂ ಸಸ್ಯಹಾರ ಮತ್ತು ಮಾಂಸಹಾರದ ಹೊಟೇಲ್, ಲಾಡ್ಜಿಂಗ್, ರೆಸ್ಟೊರೆಂಟ್ ವ್ಯವಸ್ಥೆಗಳನ್ನು ಹೊಂದಿದೆ. 2020ರಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಆರಂಭವಾಗಿದೆ.

Comments are closed.