ಉಡುಪಿ: ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಹೆಜಮಾಡಿಯಲ್ಲಿ ನಡೆದಿದೆ.
(ಸಾಂದರ್ಭಿಕ ಚಿತ್ರ)
ಮೃತಪಟ್ಟವರು ಹೆಜಮಾಡಿ ಎನ್.ಎಸ್. ರಸ್ತೆಯ ಮೊಹ್ಸಿನ್ (16) ಹಾಗೂ ಎಸ್.ಎಸ್.ರಸ್ತೆ ನಿವಾಸಿ ಮುಹಮ್ಮದ್ ರಾಯಿಸ್ (16) ಎನ್ನಲಾಗಿದೆ.
ಪಡುಬಿದ್ರಿ ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿವೆ ಬಳಿ ಮೂವರು ತರುಣರು ನೀರಿಗಿಳಿದು ಈಜುತ್ತಿದ್ದಂತೆಯೇ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.ನಂತರ ಇದನ್ನು ಕಂಡ ಮಹಿಳೆಯೋರ್ವರು ಸ್ಥಳೀಯರಿಗೆ ಮಾಹಿತಿ ನೀಡಿದರು ಎಂದು ತಿಳಿಯಲಾಗಿದೆ.
ಮಾಹಿತಿ ತಿಳಿದ ತಕ್ಷಣ ಮೂವರನ್ನು ಮೇಲಕ್ಕೆತ್ತಲಾಗಿದ್ದು, ಓರ್ವ ಅದಾಗಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದಾನೆ.ಮುಹಮ್ಮದ್ ನಬೀಲ್ ಎಂಬಾತ ಅಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments are closed.