ಕರಾವಳಿ

ಇನ್ನೂ 15 ದಿನಗಳವರೆಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭಕ್ತರಿಗೆ ಅವಕಾಶವಿಲ್ಲ

Pinterest LinkedIn Tumblr

ಉಡುಪಿ: ಜೂನ್ 1 ರಿಂದ ರಾಜ್ಯದ ದೇವಸ್ಥಾನಗಳು ದರ್ಶನಕ್ಕೆ ಅವಕಾಶ ನೀಡಿದರೂ ಸಹ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಂದಿನ 15 ದಿನಗಳ ಕಾಲ ಪ್ರವೇಶಕ್ಕೆ ಅವಕಾಶವಿಲ್ಲ. 15 ದಿನಗಳ ಬಳಿಕ ಕ್ಷೇತ್ರ ದರ್ಶನದ ಅವಕಾಶದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

15 ದಿನಗಳ ನಂತರ ಆ ಸಂದರ್ಭಾನುಸಾರ ಕೊರೊನಾ ಪರಿಣಾಮವನ್ನು ಗಮನಿಸಿ ಇತರ ಮಠಾಧೀಶರು ಸಹಮತ ಮತ್ತು ಸಲಹೆ ಸೂಚನೆಯನ್ನು ಅನುಸರಿಸಿ ಹಿಂದಿನ ದಿನಗಳಂತೆಯೇ ಭಕ್ತರಿಗೆ ಮುಕ್ತವಾಗಿ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪರ್ಯಾಯ ಅದಮಾರು ಮಠ ಪೊಡವಿಗೊಡೆಯ ಶ್ರೀಕೃಷ್ಣನ ಕ್ಷೇತ್ರ ಉಡುಪಿಯಲ್ಲಿ ಆಚಾರ್ಯ ಮಧ್ವರು ಶ್ರೀ ಕೃಷ್ಣನು ಪ್ರತಿಷ್ಠಾಪಿಸಿ, ಪರಂಪರೆಯ ರಕ್ಷಣೆಗಾಗಿ ಮತ್ತು ತತ್ವಜ್ಞಾನ ಪ್ರಸಾರಕ್ಕಾಗಿ ಅಷ್ಟ ಯತಿವರ್ಯರಿಗೆ ಶ್ರೀ ಕೃಷ್ಣ ಪೂಜಾ ದೀಕ್ಷೆ ನೀಡಿದರು. ಈ ಪೂಜಾ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಪ್ರಸಕ್ತ ಕೊರೊನಾ ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠ ಪರಂಪರೆ ಉಳಿಸುವ ದೃಷ್ಟಿಯಿಂದ ಈ ದಿನಗಳಲ್ಲಿ ಭಕ್ತರಿಗೆ ಶ್ರೀಕೃಷ್ಣಮಠದ ಒಳಗೆ ಪ್ರವೇಶ ನೀಡದೆ ಪ್ರಧಾನ ಮಂತ್ರಿಗಳ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿಕೊಂಡು ಬಂದಿದೆ.

ಶ್ರೀಕೃಷ್ಣ ಭಕ್ತರು ಹೊರಗಡೆಯಿಂದ ದರ್ಶನಕ್ಕೆ ವ್ಯವಸ್ಥೆ ಇದ್ದು ಭಕ್ತರು ಸಹಕಾರವನ್ನು ನೀಡಿದ್ದಾರೆ. ಶ್ರೀಕೃಷ್ಣಮಠದಲ್ಲಿ ಅಗತ್ಯ ಸೇವಾ ಪರಿಚಾರಕರು ಮಾತ್ರ ಒಳಗೆ ಇದ್ದು ಪೂಜಾ ಕೈಂಕರ್ಯ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ.

Comments are closed.