ಕುಂದಾಪುರ: ಯುವತಿಯೋರ್ವಳು ಯಾರಿಗೂ ತಿಳಿಸದೇ ಮನೆ ಬಿಟ್ಟು ತೆರಳಿದ ಬಗ್ಗೆ ವರದಿಯಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ವಂಡಾರು ಗ್ರಾಮದ ಗರ್ನಕೋಡಿ ನಿವಾಸಿ ಪವಿತ್ರ (20) ಕಾಣೆಯಾದ ಯುವತಿ.
ಅ.3ರಂದು ಸಂಜೆ ವೇಳೆ ತನ್ನ ಮನೆಯಿಂದ ಯಾರಿಗೂ ಹೇಳದೇ ಹೋದಾಕೆ ಮರಳಿರಲಿಲ್ಲ. ಕುಟುಂಬಿಕರು ಎಲ್ಲೆಡೆ ಹುಡುಕಾಡಿದರೂ ಕೂಡ ಆಕೆಯ ಪತ್ತೆಯೂ ಆಗಿಲ್ಲ. ಸದ್ಯ ಯುವತಿ ತಂದೆ ಶಂಕರನಾರಾಯಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಗಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಆಕೆ ಹುಬ್ಬಳ್ಳಿ ಮೂಲದ ಯುವಕನೊಂದಿಗೆ ಹೋಗಿರುವ ಬಗ್ಗೆ ಅನುಮಾನ ಇರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Comments are closed.