ಕರಾವಳಿ

100ರ ಸಂಭ್ರಮವನ್ನಾಚರಿಸಿದ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಮದನ ಮಾಸ್ಟರ್‌

Pinterest LinkedIn Tumblr

madan_master_1

ಮಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಕ, ಪ್ರಗತಿಪರ ಕೃಷಿಕ, ರಾಜಿ ಪಂಚಾಯತಿದಾರರು, ಕಮ್ಯೂನಿಸ್ಟ್ ಮುಖಂಡರಾದ ಪೆರ್ಲ ಕೆ.ಪಿ.ಮದನ್ ಮಾಸ್ಟರ್ ಅವರು ತಮ್ಮ ಜೀವನದ ನೂರನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಸರ್ವ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಶುಭಹಾರೈಸಲಾಯಿತು.

ತಮ್ಮ ಶಕ್,ಕರೂ ಆಗಿರುವ ಮದನ ಮಾಸ್ಟರ್ ಅವರು ಯಾವುದೇ ರೀತಿಯ ಸಹಾಯ ಮಾಡುವಾಗ ಅವರ ರಾಜಕೀಯ ಪಕ್ಷ, ಜಾತಿ, ಧರ್ಮಗಳ ಗಮನಕ್ಕೆ ತೆಗದುಕೊಳ್ಳದೆ ಎಲ್ಲರನ್ನು ಸಮಾರಗಿ ನೋಡುವ ಆದರ್ಶ ಗುಣ ಅವರಲ್ಲಿದೆ. ನೂರು ವರ್ಷಗಳ ಕಾಲ ಉತ್ತಮ ಆರೋಗ್ಯದಿಂದ ಬದುಕಿರುವರು ಇನ್ನು ಕೂಡ ಹೆಚ್ಚು ವರ್ಷ ಬಾಳಲಿ ಎಂದು ಪುತ್ತೂರು ಶಾಸಕಿ, ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪೆರ್ಲ ಶಂಕರ ಸದನದಲ್ಲಿ ನಡೆದ ಕೆ.ಪಿ.ಮದನ್ ಮಾಸ್ಟರ್ ಅವರ ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಮದನ ಮಾಸ್ಟರ್ ಅವರನ್ನು ಸತ್ಕರಿಸಿ ಮಾತನಾಡಿದರು.

madan_master_2 madan_master_3

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ, ಸಮಾಜದ ಎಲ್ಲ ವರ್ಗವರಿಗೆ ಶಿಕ್ಷಣ, ಭೂಮಿಯ ಹಕ್ಕು ಸಹಿತ ಎಲ್ಲ ರೀತಿಯ ಸಹಾಯಹಸ್ತ ನೀಡುತ್ತಿದ್ದ ಕೆ.ಪಿ.ಮದನ್ ಮಾಸ್ಟರ್ ಅವರು ಸಮಾಜದಲ್ಲಿ ಅಜಾತಶತ್ರು. ತನಗಾಗಿ, ತನ್ನ ಕುಟುಂಬಕ್ಕಾಗಿ ಏನನ್ನೂ ಮಾಡದೆ ಸಮಸ್ತವನ್ನು ವನ್ನು ಜಾತಿ,ಧರ್ಮ, ರಾಜಕೀಯ ಪಕ್ಷದ ತಾರತಮ್ಯ ಇಲ್ಲದೆ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದವರು ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಹೇಳಿದರು.

ಇಂದಿಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಸಮಾಜದ ಎಲ್ಲ ಸ್ತರದ ಜನರು, ಎಲ್ಲ ಜಾತಿ ,ಧರ್ಮಗಳ , ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿರುವುದು ಕೆ.ಪಿ.ಮದನ್ ಮಾಸ್ಟರ್ ಅವರ ಸಮಾಜಪರ ಜೀವನ ಶೈಲಿಗೆ ಉದಾಹರಣೆಯಾಗಿದೆ. ಅವರು ಕಾಲೇಜು ತೊರೆದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ದೇಶದ ಹಲವೆಡೆ ಸೇವೆ ಸಲ್ಲಿಸಿ ಕೊನೆಗೆ ಹುಟ್ಟೂರಿಗೆ ಆಗಮಿಸಿ ಇಲ್ಲಿ ರೈತರಾಗಿ, ಶಿಕ್ಷಕರಾಗಿ,ಸಮಜ ಸೇವಕರಾಗಿ, ರಾಜಕೀಯ ಮುಖಂಡರಾಗಿ ಹಲವಾರು ಮಂದಿ ಜೀವನದ ದಾರಿ ತೋರಿಸಿ ಇಂದು ಬಹುದೊಡ್ಡ ಎತ್ತರಕ್ಕೆ ಏರಲು ಸಹಾಯ ಮಾಡಿದವರು ಮದನಮಾಸ್ಟರ್ ಅವರು ಎಂದು ಸದಾನಂದ ಪೆರ್ಲ ಹೇಳಿದರು.

ರಾಜಕೀಯ ಚಟುವಟಿಕೆ ಮೂಲಕ ಸಮಾಜ ಎಲ್ಲ ಸ್ತರದ ಜನರಿಗೆ, ಗ್ರಾಮೀಣ ಪ್ರದೇಶದ ರೈತಾಪಿ ಜನತೆಗೆ ಪರಿಶ್ರಮವಹಿಸಿದವರು ಮದನ ಮಾಸ್ಟರ್ ಎಂದು ಮಾಜಿ ಶಾಸಕರು ಮತ್ತು ಸಿಪಿ‌ಐ‌ಎಂ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್ ಹೇಳಿದರು.

ಆರೋಗ್ಯವನ್ನು ಕಾಪಾಡಿಕೊಂಡು ನೂರು ವರ್ಷ ಬದುಕುವುದು ಕಡಿಮೆ ಸಾಧನೆಯಲ್ಲ. ತಮ್ಮ ಜೀವನವುದಕ್ಕೂ ಜನರಿಗಾಗಿ ಕೆಲಸ ಮಾಡಿದ ಮದನ ಮಾಸ್ಟರ್ ಅವರು ಉತ್ತಮ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಮಂಜೇಶ್ವರ ಶಾಸಕರ ಅಬ್ದುಲ್ ರಜಾಕ್ ಹೇಳಿದರು.

ತಮ್ಮ ಮಕ್ಕಳಿಂದ ಹೆಚ್ಚಾಗಿ ತನ್ನಲ್ಲಿ ಪ್ರೀತಿ ಇರಿಸಿ ಕೊಂಡಿರುವ ಮದನ ಮಾಸ್ಟರ್ ಅವರು ಎಂದೂ ಕೂಡ ರಾಜಕೀಯ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ವಿಚರಗಳ ನಡುವೆ ತರುತ್ತಲೇ ಇರಲಿಲ್ಲ. ಸೈದ್ಧಾಂತಿಕ ಕಾರಣಕ್ಕಗಿ ಒಬ್ಬನನ್ನು ದೂರ ಇರಿಸುವ ಕ್ರಮ ಅವರಲ್ಲಿ ಇಲ್ಲ ಎಂದು ಡಾ. ಶ್ರೀಪತಿ ಕಜಂಪಾಡಿ ನುಡಿದರು.

ರಾಜಿ ಪಂಚಾಯತಿಕೆ ಮೂಲಕ ಗ್ರಾಮೀಣ ಪ್ರದೇಶದ ಬಹಳಷ್ಟು ಕುಟುಂಬಗಳಿಗೆ ಸಹಾಯ ಮಾಡಿದ ಹಿರಿಯ ರಾಜಿ ಪಂಚಾಯಿತಿಗಾರರು ಎಂದು ಬ್ಯಾರಿ ಅಕಾಡಮಿ ಸದಸ್ಯೆ ಅಯಿಶಾ ಪೆರ್ಲ ಅಭಿಪ್ರಾಯಪಟ್ಟರು.
ಉದ್ಯಮಿ ಹಸನೈರ್ ಹಾಜಿ, ಏಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರು, ರೂಪವಾಣಿ ಭಟ್, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಅರುಣಾ ಜೆ. ಏಣ್ಮಕಜೆ ಗ್ರಾಮ ಪಂಚಾಯತ್ ಶ‌ಉಪಾಧ್ಯಕ್ಷ ಪುಟ್ಟಪ್ಪ ,ಸಿಪಿ‌ಐ ಕಾಸರಗೋಡು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ಬಿ.ವಿ.ರಾಜನ್, ಮಂಜೇಶ್ವರ ಮಂಡಲ ಇಂಟಕ್ ಅಧ್ಯಕ್ಷರು ಸುನೀತ್ ಮಾಸ್ಟರ್, ಐಯು‌ಎಂಎಲ್, ಏಣ್ಮಕಜೆ ಘಟಕದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ಮಾಣಿಲ ಗ್ರಾಮ ಪಂಚಾಯತು ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಸಿಪಿ‌ಐ‌ಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿ ಸುಬ್ಬಣ್ಣ ಆಳ್ವ , ಏಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಉಪಸ್ಥಿತರಿದ್ದರು.

Comments are closed.