ಉಡುಪಿ: ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸೂಟ್ ಹೊಟೇಲ್ ನಲ್ಲಿರುವ ಬಾರ್ ಪರವಾನಿಗೆಯನ್ನು ಉಡುಪಿ ಅಬಕಾರಿ ಇಲಾಖೆ ರದ್ದುಗೊಳಿಸಿದೆ. ಈ ದಾಳಿಯ ವೇಳೆ ಕರ್ತವ್ಯ ಲೋಪ ಎಸಗಿರುವ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಹೊಟೇಲಿನ ಆರನೆ ಮಹಡಿಯಲ್ಲಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು ದೊರೆತ ಮಾಹಿತಿಯಂತೆ ಅಬಕಾರಿ ಇಲಾಖಾ ಪೆ ನೀಡುಗರು ಲೀಸ್ ತಂಡವು ಆ .27 ರಂದು ಹೊಟೇಲ್ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.
ಈ ದಾಳಿಯ ವೇಳೆ ಪ್ರಕರಣವನ್ನು ದಾಖಲಿಸದೆ ಕರ್ತವ್ಯ ಲೋಪ ಎಸಗಿದ್ದ ಕುಂದಾಪುರ ಅಬಕಾರಿ ನಿರೀಕ್ಷಕಿ ಶುಭದಾ ಸಿ ನಾಯಕ್ ಹಾಗೂ ಉಡುಪಿ ನಿರೀಕ್ಷಕಿ ಜ್ಯೋತಿ ಅವರನ್ನು ಅಮಾನುತಗೊಳಿಸಲಾಗಿದೆ. ಈ ಕುರಿತು ಅಬಕಾರಿ ಡಿವೈಎಸ್ಪಿ ವಿನೋಬ್ ತನಿಖೆ ನಡೆಸಿ ವರದಿ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಜಿಲ್ಲಾಧಿಕಾರಿ ನಾಗೇಶ್ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.
Comments are closed.