ತೊಕ್ಕೊಟ್ಟು, ಅ.20: ಉಳ್ಳಾಲ-ತೊಕ್ಕೊಟ್ಟು ಸಮೀಪ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ವ್ಯಾಪಾರಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ತೊಕ್ಕೊಟ್ಟಿನ ರಕ್ಷಾ ಕ್ಲಿನಿಕ್ ಸಮೀಪದ ಗಣೇಶ್ ಜನರಲ್ ಸ್ಟೋರ್ ಮಾಲಕ ಸಂಜೀವ ಕೆ.ಟಿ (66) ಎಂಬವರೇ ಮೃತ ದುರ್ದೈವಿ.
ರೈಲಿನ ಹೊಡೆತಕ್ಕೆ ಸಿಲುಕಿ ಅವರ ಮೃತದೇಹವು ಸಂಪೂರ್ಣ ಜರ್ಝರಿತ ಸ್ಥಿತಿಯಲ್ಲಿ ಇಲ್ಲಿನ ರೈಲ್ವೆ ಹಳಿ ಬದಿ ಪತ್ತೆಯಾಗಿದೆ. ಹಳಿ ದಾಟುತ್ತಿದ್ದ ಸಂದರ್ಭ ಅಕಸ್ಮಾತ್ತಾಗಿ ರೈಲು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
Comments are closed.