ಉಡುಪಿ: ಚಲೋ ಉಡುಪಿಯಲ್ಲಿ ಪೇಜಾವರ ಶ್ರೀಗಳ ಅವಹೇಳನ ಮಾಡಿದ್ದಲ್ಲದೇ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಒಡ್ಡಿದ ಬಗ್ಗೆ ಉಡುಪಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮುಖಂಡರು ಪ್ರತಿಭಟನೆ ನಡೆಸಿದರು. ಉಡುಪಿಯ ಸಂಸ್ಕೃತ ಕಾಲೇಜ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಚಲೋ ಉಡುಪಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಇದರಲ್ಲಿ ರಾಜೀಕಿಯ ನಾಟಕವಿದೆ . ಕೃಷ್ಣ ಮಠಕ್ಕೆ ಯಾರಿಂದಲು ಮುತ್ತಿಗೆ ಹಾಕಲು ಸಾದ್ಯವಿಲ್ಲ. ಶ್ರೀಗಳ ಹಿಂದೆ ಎಲ್ಲಾ ಧರ್ಮದವರು ಇದ್ದಾರೆ. ಮಠಕ್ಕೆ ಮುತ್ತಿಗೆ ಹಾಕಿದ್ರೆ ನಾವು ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.