ಕರಾವಳಿ

ಬೈಂದೂರು: ಬಡ ವಿದ್ಯಾರ್ಥಿ ವಿದ್ಯಾಭ್ಯಾಸಕ್ಕೆ ನೆರವಾದ ಯುವ ಜಾಗೃತಿ ವೇದಿಕೆ

Pinterest LinkedIn Tumblr

ಕುಂದಾಪುರ: ಯುವ ಜಾಗೃತಿ ವೇದಿಕೆ (ರಿ) ಮತ್ತು ರಕ್ಷಾ ರೂರಲ್ ಡೆವೆಲೆಪಮೆಂಟ್ ಟ್ರೈನಿಂಗ್ ಸೊಸೈಟಿ ಕುಂದಾಪುರ ಇದರ ವತಿಯಿಂದ ಯುವ ಜಾಗೃತಿ ವೇದಿಕೆ (ರಿ) ಇದರ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಡಿ ಹಾರ್ಮನ್ ಮತ್ತು ಕೆ.ಆರ್ ನಾಯಕ್ , ರಮೇಶ್ ಇವರ ಸಹಕಾರದಲ್ಲಿ ಬೈಂದೂರಿನ ಶ್ಯಾಮಿನಕೊಡ್ಲು ವಿದ್ಯಾರ್ಥಿನಿ ಜ್ಯೋತಿ ದೇವಾಡಿಗ ಇವರ ಕಾಲೇಜು ವಿದ್ಯಾಭ್ಯಾಸಕ್ಕೆ ನೆರವಾಗಲು ಒಂದು ವರ್ಷದ ವಸತಿ ನಿಲಯದ ವೆಚ್ಚವನ್ನು ನೀಡಲಾಯಿತು.

Yuvajagrati Vedike_Byndoor_News (3) Yuvajagrati Vedike_Byndoor_News (1) Yuvajagrati Vedike_Byndoor_News (2)

ಈ ಸಂದರ್ಭದಲ್ಲಿ ಯುವ ಜಾಗೃತಿ ವೇದಿಕೆ (ರಿ) ಕುಂದಾಪುರ ಅಧ್ಯಕ್ಷ ರಮೇಶ್, ಉದ್ಯಮಿ ಕೆ.ಆರ್. ನಾಯಕ್ , ದೇವಾಡಿಗರ ಒಕ್ಕೂಟ (ರಿ) ಬೈಂದೂರು ಇದರ ಸಲಹಾ ಸಮಿತಿಯ ಹಿರಿಯ ಸದಸ್ಯ ಎಸ್.ಡಿ ಹೇನ್ಬೇರ್ ,ಜೊತೆ ಕಾರ್ಯದರ್ಶಿ ಚಂದ್ರ ದೇವಾಡಿಗ, ಸಂಘಟನಾ ಕಾರ್ಯದರ್ಶಿ ರಘುರಾಮ್ ಬೈಂದೂರು , ಮಹಾಲಿಂಗ ದೇವಾಡಿಗ ಉಪಸ್ಥಿತರಿದ್ದರು .

ಇದೆ ವೇಳೆ ಯುವ ಜಾಗೃತಿ ವೇದಿಕೆ (ರಿ) ಮತ್ತು ರಕ್ಷಾ ರೂರಲ್ ಡೆವೆಲೆಪಮೆಂಟ್ ಟ್ರೈನಿಂಗ್ ಸೊಸೈಟಿ ಸಂಘಟನೆಗೆ ದೇವಾಡಿಗರ ಒಕ್ಕೂಟ (ರಿ) ಬೈಂದೂರು ಇದರ ಪರವಾಗಿ ಎಸ್ ಡಿ ಹೇನ್ಬೇರ್ ಅಭಿನಂದನೆ ಸಲ್ಲಿಸಿದರು.

Comments are closed.