ದುಬೈ: ಇಲ್ಲಿನ ದೇರಾ ರಾಫಿ ಹೋಟೆಲ್ನಲ್ಲಿ ಮಂಗಳೂರು ಎಂ.ಫ್ರೆಂಡ್ಸ್ ಬಳಗವು ಶುಕ್ರವಾರದಂದು ‘ದುಬೈ ಮಿಲನ -2016’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ದೇಶದಲ್ಲಿ ಪ್ರಸಕ ರಾಜಕೀಯ ಸನ್ನಿವೇಶವು ಗೊಂದಲಕಾರಿಯಾಗಿದೆ. ಆಡಳಿತರೂಢ ಸರಕಾರ ಯೋಜನೆ ಜಾರಿಗೆ ತರಲು ಹೊರಟರೆ, ಪ್ರತಿಪಕ್ಷಗಳು ವಿರೋಧಸುತ್ತವೆ. ಸರಕಾರ ಎಂಬುದು ದೇಶದ ಜನರ ಹಿತಕಾಯುವಂತಿರಬೇಕು ಎಂದರು.
ಅವರು ಮಾತನಾಡಿ ಭಾರತದಲ್ಲಿ ಸಂವಿಧಾನ ರೂಪುಗೊಂಡು ಮೊದ ಮೊದಲ ಸರಕಾರದಿಂದ ಜಾರಿಗೆ ತರಲು ಉದ್ದೇಶಿತ ಯೋಜನೆಗಳು ಬಹಳ ಸುಲಭದಲ್ಲಿ ಅಂಗೀಕಾರವಾಗುತಿತಿತುತಿ ಆಗ ಶಿಕ್ಷಣದ ಕೊರೆತೆ ಕೂಡ ಇತುತಿ ಆದರೆ ಇವತುತಿ ಆಡಳಿತ ನಡೆಸುವವರು ವಿದ್ಯಾವಂತರಾಗಿಯೂ ಒಂದು ಪಕ್ಷದ ಅಧೀನದಲ್ಲಿರುವ ಕೇಂದ್ರ ಸರಕಾರ ಯೋಜನೆಯನ್ನು ಜಾರಿಗೆ ತರಲು ಮುಂದಾದರೆ ಅದನ್ನು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ತಡೆ ಹಿಡಿಯುತತಿದೆ. ಸರಕಾರ ಎನ್ನುವಂತದ್ದು ಸಾರ್ವಜನಿಕರ ಆಸಿತಿ ಎಂಬುವುದನ್ನು ಆಡಳಿತವರ್ಗ ಮರೆತಂತೆ ಕಾಣುತತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕದ ಸಚಿವರಾದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಎಂ.ಫ್ರೆಂಡ್ಸ್ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸೌದಿಯದ ಅಮೆಕೋ ಸಂಸ್ಥೆಯ ಆಸಿಫ್ ಹಾಗೂ ಅಲ್ ಫಲಾಹ್ ಗ್ರೂಪ್ ಆಫ್ ಹೋಟೆಲ್ಸ್ನ ಆಡಳಿತ ನಿರ್ದೇಶಕ ಯೂಸುಫ್ ಅವರಿಗೆ ಎಂ.ಫ್ರೆಂಡ್ಸ್ ವತಿಯಿಂದ ಶಾಲು ಹೊದಿಸಿ ಆತ್ಮೀಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದುಬೈ ಆಲಿಯ ಅಲ್ ಹಬೂತಿರ್ ಎಂ.ಡಿ ಇಕ್ಬಾಲ್ ಅಬ್ದುಲ್ ಹಮೀದ್, ಕಾಸರಗೋಡು ಮುನ್ಸಿಪಲ್ ಮಾಜಿ ಚೇರ್ಮನ್ ಅಬ್ದುಲ್ಲ ಕುಂಞ್ಞಿ, ರಶೀದ್ ಹಾಜಿ ಬೆಳ್ಳಾರೆ, ಅಬ್ದುಲ್ಲಾ ಮದುಮೂಲೇ, ಬಿ.ಡಬ್ಲು.ಎಫ್ ಮಹಮ್ಮದ್ ಅಲಿ ಉಚ್ಚಿಲ, ಸಲೀಂ ಅಲ್ತಾಫ್ ಫರಂಗಿಪೇಟೆ, ಝೈನುದ್ದೀನ್ ಬೆಳ್ಳಾರೆ, ಬಶೀರ್ ಬೊಳ್ವಾರ್, ತಾಯ್ನಡಿನಿಂದ ಆಗಮಿಸಿದ ಎಂ.ಫ್ರೆಂಡ್ಸ್ ತಂಡದ ಹನೀಫ್ ಅಲ್ ಫಲಾಹ್, ವಿ.ಎಚ್.ಅಶ್ರಫ್ ವಿಟ್ಲ, ಕಲಂದರ್, ಅಬ್ಬಾಸ್ ಉಕ್ಕುಡ ಹಾಗೂ ಯುಎಇ ಪ್ರತಿನಿಧಿಗಳಾದ ಹನೀಫ್ ಪುತ್ತೂರು ಅಬುಧಾಬಿ, ಹಾರಿಸ್ ಕಾಂತಡ್ಕ ಅಬುಧಾಬಿ, ನವಾಝ್ ಕೆ ದುಬೈ, ಮಹಮ್ಮದ್ ಶರೀಫ್ ಕೆ ಅಜ್ಮಾನ್ ಮೊದಲಾದವರು ಉಪಸ್ಥಿತರಿದ್ದರು.