ಶಾರ್ಜಾ. ಯು.ಎ.ಇ. ಗೆ ಡಿ.ಕೆ.ಯಸ್.ಸಿ ಯ ಜಲಾಲಿಯ ವಾರ್ಷಿಕ ಸಮಾರಂಭಕ್ಕೆ ಮಜ್ಲಿಸ್ ನ ನೇತ್ರತ್ವವನ್ನು ವಹಿಸಲು ಆಗಮಿಸಿದ ಸಯ್ಯದ್ ಅಹಮದ್ ಮುಕ್ತಾರ್ ತಂಙಲ್ ಕುಂಬೋಲ್ ರವರಿಗೆ .ಕೆ.ಯಸ್.ಸಿ ಶಾರ್ಜಾ ಯುನಿಟ್ ವತಿಯಿಂದ ಸನ್ಮಾನ ಹಾಗೂ ಅದ್ಯಾತ್ಮಿಕ ಮಜ್ಲಿಸ್ ಡಿ.ಕೆ.ಯಸ್.ಸಿ ಶಾರ್ಜಾ ಯುನಿಟ್ ಗೌರವಾಧ್ಯಕ್ಷರಾದ ಜನಾಬ್.ಅಬ್ದುಲ್ ಲತೀಪ್ ಮುಲ್ಕಿ ರವರ ಅದ್ಯಕ್ಷತೆಯಲ್ಲಿ ಅವರ ನಿವಾಸ ದಲ್ಲಿ ನಡೆಯಿತು.
ಕಾರ್ಯಕ್ರಮವು ಡಿ.ಕೆ.ಯಸ್.ಸಿ ಯು.ಎ.ಇ.ರಾಷ್ಟ್ರೀಯ ಸಮಿತಿ ಯ ಗೌರವಾಧ್ಯಕ್ಷರು ಅದ ಬಹು ಸಯ್ಯದ್ ತ್ವಾಹ ಬಾಫಕಿ ತಂಙಲ್ ರವರ ದುವಾ ದೊಂದಿಗೆ ಪ್ರಾರಂಭಗೊಂಡು ಡಿ.ಕೆ.ಯಸ್.ಸಿ. ಶಾರ್ಜಾ ಯುನಿಟ್ ಪ್ರದಾನ ಕಾರ್ಯದರ್ಶಿ ಜನಾಬ್.ಇಬ್ರಾಹಿಂ ಸಖಾಪಿ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತ ಭಾಷಣ ಮಾಡಿದರು.
ಸಭೆಯಲ್ಲಿ ಸಯ್ಯದ್ ಅಹಮದ್ ಮುಕ್ತಾರ್ ತಂಙಲ್ ರವರನ್ನು ಜನಾಬ್.ಅಬ್ದುಲ್ ಲತೀಪ್ ಮುಲ್ಕಿ, ಜನಾಬ್.ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್,ಸಯ್ಯದ್ ಅಸ್ಗರಲಿ ತಂಙಲ್ ರವರು ಸಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೆ ಡಿ.ಕೆ.ಯಸ್.ಸಿ.ಯು.ಎ.ಇ. ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರೂ ಜಲಾಲಿಯಾ ದ ಯು.ಎ.ಇ. ಗೆ ಕಲೀಪ ರೂ ಅದ ಬಹು ಸಯ್ಯದ್ ತ್ವಾಹ ಬಾಫಕಿ ತಂಙಲ್, ಡಿ.ಕೆ.ಯಸ್.ಸಿ.ಯು.ಎ.ಇ. ರಾಷ್ಟ್ರೀಯ ಸಮಿತಿ ಸಲಹೆಗಾರರಾದ ಬಹು. ಸಯ್ಯದ್ ಅಸ್ಗರಲಿ ತಂಙಲ್,ಜಲಾಲಿಯ ಸಮಿತಿ ಚೈರ್ಮೆನ್ ಜನಾಬ್.ಎಸ್.ಯೂಸುಫ್ ಅರ್ಲಪದವು ರವರನ್ನು ಸಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಾಬ್.ಮುನೀರ್ ಹಾಜಿ ಸಿಲಾಂಡ್, ಜನಾಬ್.ಹಾಜಿ..ಯೂಸುಫ್ ಸವಣೂರು, ಜನಾಬ್.ಅಬ್ದುಲ್ ಖಾದರ್ ಸಖಾಫಿ, ಜನಾಬ್.ಹಸೈನಾರ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್, ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೈರ್ಮೆನ್ ಜನಾಬ್. ಹಾಜಿ. ಎಂ.ಇ. ಮೂಳೂರು, ಜನಾಬ್.ಹಾಜಿ.ಅಬ್ದುಲ್ಲ ಬಿಜಾಡಿ, ಜನಾಬ್.ಅಬೂಬಕ್ಕರ್ ಮದನಿ ಹಾಗೂ ಹಲವಾರು ಉಲಮಾ ಉಮರಾಗಳು ಉಪಸ್ಥಿತರಿದ್ದರು. ಸಯ್ಯದ್ ಅಹಮದ್ ಮುಕ್ತಾರ್ ತಂಙಲ್ ಕುಂಬೋಲ್ ಹಾಗೂ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್. ಇಕ್ಬಾಲ್ ಕಣ್ಣಂಗಾರ್ ರವರು ಶಾರ್ಜಾ ಯುನಿಟ್ ಗೌರವಾಧ್ಯಕ್ಷರಾದ ಜನಾಬ್.ಅಬ್ದುಲ್ ಲತೀಪ್ ಮುಲ್ಕಿ, ಕಾರ್ಯದರ್ಶಿ ಜನಾಬ್.ಕಮರುದ್ದೀನ್ ಗುರುಪುರ ರವರಿಗೆ ಸದಸ್ಯತನ ಫಾರಂ ನೀಡುವುದರ ಮೂಲಕ ಯುನಿಟ್ ನಲ್ಲಿ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ತಂಙಲ್ ರವರಿಂದ ಡಿ.ಕೆ.ಯಸ್.ಸಿ ಹಾಗೂ ಜಲಾಲಿಯ ದ ಮಹತ್ವವನ್ನು ವಿವರಿಸುವುದರೊಂದಿಗೆ ಜಲಾಲಿಯ ವಾರ್ಷಿಕ ಮಜ್ಲಿಸ್ ನಲ್ಲಿ ಹಾಜರಿರುವಂತೆ ತಿಳಿಸಿದರು.ಕಾರ್ಯಕ್ರಮದ ನಿರ್ವಹಣೆಯನ್ನು ಜನಾಬ್ ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್.ಕಮರುದ್ದೀನ್ ಗುರುಪುರ ನಿರ್ವಹಿಸಿದರು.