ಮಂಗಳೂರು,ಅ.20: ಅಮೇರಿಕಾದ ವಾಷಿಂಗ್ಟನ್ನಿನಲ್ಲಿರುವ ಪ್ರತಿಷ್ಠಿತ ದೇವಸ್ಥಾನಕ್ಕೆ ಧರ್ಮಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ತೆರೆಳುತ್ತಿರುವ ವೇದವಾರಿಧಿ ವಿಧ್ವಾನ್ ರೂಪೇಶ ಆಚಾರ್ಯರಿಗೆ ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ವಿಶೇಷ ಸನ್ಮಾನ.
ಮಂಗಳೂರು ಜ್ಯೋತಿಷ್ ವಿಧ್ವಾನ್, ಆಹಮ ತಜ್ಞ, ಸಂಸ್ಕ್ರತಜ್ಞ, ಪುರೋಹಿತ ರತ್ನ ವೇದವಾರಿಧಿ ರೂಪೇಶ್ ಆಚಾರ್ಯರು ಅಮೇರಿಕಾದ ವಾಷಿಂಗ್ಟನ್ನಿನಲ್ಲಿರುವ ಪ್ರತಿಷ್ಠಿತ ದೇವಸ್ಥಾನಕ್ಕೆ ಧರ್ಮಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ತೆರೆಳುತ್ತಿರುವ ಇವರಿಗೆ ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ವಿಶೇಷ ಸನ್ಮಾನವಾಗಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಲೋಕೇಶ್ ಆಚಾರ್ಯರು ಫಲವಸ್ತು ಹಾರ ಶಾಲು ಹೊದಿಸಿ ಅಭಿನಂದಿಸಿದರು. ಈ ಸಂದರ್ಭ ಕ್ಷೇತ್ರದ ಮೊಕ್ತೇಸರರಾದ ಪಿ.ವಸಂತ ಕುಮಾರ್ , ಆಡಳಿತ ಮಂಡಳಿ ಸದಸ್ಯರಾದ ಕೆ.ಕೇಶವ ಆಚಾರ್ಯ, ಧನಂಜಯ ಪಾಲ್ಕೆ, ಸುಜೀರ್ ವಿನೋದ್, ಬಿ.ಉಪೇಂದ್ರ ಆಚಾರ್ಯ, ಬಿ.ಕೆ ಸತೀಶ್, ಎಂ ದೇವರಾಜ್, ಚೆನ್ನಯ್ಯ ಆಚಾರ್ಯ, ಎನ್.ಎಲ್.ಬಾಬು ಆಚಾರ್ಯ, ಬಿ ಉದಯ ಆಚಾರ್ಯ, ಟಿ.ಜಯಕರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.