ಮಂಗಳೂರು,ಆ.06 : ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಕಾರ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವನ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಿನ್ನೆ ಮಂಗಳೂರಿನ ಕೆಪಿಟಿ ಸಮೀಪ ನಿನ್ನೆ ಪೂರ್ವಾಹ್ನ 11 ಗಂಟೆಗೆ ನಡೆದಿದೆ.
ಐವನ್ ಡಿ’ಸೋಜಾ ಪಂಪ್ವೆಲ್ನಿಂದ ಖಾಸಗಿ ಕಾರ್ಯ ಕ್ರಮ ಮುಗಿಸಿಕೊಂಡು ಕಾರ್ನಲ್ಲಿ ನಗರದ ಕೆಪಿಟಿ ಸರ್ಕಲ್ ಸಮೀಪ ಬರುತ್ತಿದ್ದರು. ಈ ವೇಳೆ ಬಿಜೈಯಿಂದ ಬರುತ್ತಿದ್ದ ಇಂಡಿಕಾ ಕಾರಿಗೆ ಐವನ್ ಡಿಸೋಜಾ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಐವನ್ ಡಿ’ಸೋಜಾ ಚಾಲಕ ಪ್ರದೀಪ್ ಎಂಬವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಆದರೆ ಈ ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಕ್ತಾಯಗೊಳಿಸಲಾಗಿದೆ. ಪ್ರಕರಣ ರಾಜಿಯಲ್ಲಿ ಮುಕ್ತಾಯಗೊಂಡಿರುವುದು ನಗರದ ಕೆಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.