ಶಿರ್ವ: ಇಲ್ಲಿನ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಶಾರದಾ ಎಂ. ಇವರು ಧಾರವಾಡದ `ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ “ಉಚ್ಚ ಶಿಕ್ಷಾ ಔರ್ ಶೊಧ ಸಂಸ್ಥಾನ್, ಅನುಸಂಧಾನ್ ಕೇಂದ್ರ”ದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಲಭಿಸಿದೆ.
ಶಾರದಾ ಎಂ ಅವರು ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜಿ ಭಾಸ್ಕರ ಮಯ್ಯ ಅವರ ಮಾರ್ಗದರ್ಶನದಲ್ಲಿ “ಅಕಾಲ್, ಭುಖ್ಮರಿ ಔರ್ ಸಾಮಯಿಕ್ `ವ್ಯಂಗ್ಯ’ ವಿಧಾ: ಏಕ್ ಅಧ್ಯಯನ್” ವಿಷಯದ ಕುರಿತಾಗಿ ಈ ಸಂಶೋಧನ ಪ್ರಬಂಧ ಮಂಡಿಸಿದ್ದರು.