ಮಂಗಳೂರು,ಅ.01: ತಮಿಳುನಾಡು ರಾಜ್ಯದ ಗೆರುಗಂಬಕ್ಕಮ್ನಲ್ಲಿ ಕರ್ಣಾಟಕ ಬ್ಯಾಂಕಿನ 619ನೇ ಶಾಖೆಯ ಉದ್ಘಾಟನೆಯು ಬುಧವಾರದಂದು ಚೆನ್ನೈನ ಎಮ್ಐಒಟಿ ಇಂಟರ್ ನ್ಯಾಷನಲ್ ಹಾಸ್ಪಿಟಲ್ನ ಮೆಡಿಕಲ್ ಡೈರೆಕ್ಟರ್ ಪ್ರೊಪೆಸರ್ ಡಾ| ಜಾರ್ಜ್ ಎಮ್. ಚಾಂಡಿ ಉದ್ಘಾಟಿಸಿದರು.
ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಪಿ. ಜಯರಾಮ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಬ್ಯಾಂಕಿನ ನಿರ್ದೇಶಕರಾದ ಸರ್ವಶ್ರೀ ಟಿ. ಆರ್. ಚಂದ್ರಶೇಖರನ್, ಚೆನ್ನೈ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಬಂಧಕ ಶ್ರೀ ರವಿ ಎಸ್, ಗೆರುಗಂಬಕ್ಕಮ್ನ ಶಾಖಾಪ್ರಬಂಧಕ ಶ್ರೀ ಕೃಷ್ಣಮೂರ್ತಿ ಎಸ್. ಮತ್ತು ಸಿಸ್ಮ್ಯಾಕ್ ಇಂಜಿನಿಯರ್ಸ್ನ ಪಾಲುದಾರ ನಾರಾಯಣ ಭಟ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.