ಕರಾವಳಿ

ಪದವು ಕಾಲೇಜಿನಲ್ಲಿ ಮೇಗಾ ರಕ್ತದಾನ ಹಾಗೂ ರಕ್ತ ವರ್ಗೀಕರಣ ಶಿಬಿರ

Pinterest LinkedIn Tumblr

bollde_donation_camp_2

ಮಂಗಳೂರು,ಸೆ.27: ಲಯನ್ಸ್ ಕ್ಲಬ್ ಮಂಗಳೂರು, ತೇಜಸ್ವಿನಿ ಹಾಗೂ ಎಜೆ ಆಸ್ಪತ್ರೆ ಸಹಯೋಗದೊಂದಿಗೆ ಪದವು ಕಾಲೇಜಿನ ಶನಿವಾರದಂದು ಮೆಗಾ ರಕ್ತದಾನ ಹಾಗೂ ರಕ್ತ ವರ್ಗೀಕರಣ ಶಿಬಿರ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಉದ್ಘಾಟಿಸಿ ಮಾತಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಾಜ ಸೇವೆಯ ಬಗ್ಗೆ ಹೆಚ್ಚಿನ ಕಾಳಜಿ ತೊಡಗಿಸಿಕೊಳ್ಳಬೇಕು. ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು ಈ ಬಗ್ಗೆ ಮಕ್ಕಳು ಬೆಳೆಯುತ್ತಲೇ ಸರಿಯಾದ ಮಾಹಿತಿ ಪಡೆದುಕೊಂಡು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೋಬ್ಬರಿಗೆ ಜೀವದ ರಕ್ಷಣೆಗೆ ನೆರವಾಗಬೇಕು’ ಎಂದು ಹೇಳಿದರು.

bollde_donation_camp_6 bollde_donation_camp_3 bollde_donation_camp_4bollde_donation_camp_5a

ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪದವು ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Write A Comment