ಮಂಗಳೂರು,ಸೆ.26: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆರ್ಶೀವಾದದೊಂದಿಗೆ, ಕಲ್ಕೂರ ಪ್ರತಿಷ್ಠಾನವು ಅ. ೪ನೇ ಶನಿವಾರ ವಿಜಯದಶಮಿಯ ಪ್ರಯುಕ್ತ ಮಕ್ಕಳಿಗಾಗಿ ಅಕ್ಷರಾಭ್ಯಾಸ- ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದಲ್ಲಿನವಾದಿರಾಜ ಮಂಟಪದಲ್ಲಿ ಬೆಳಿಗ್ಗೆ 8 ರಿಂದಅಕ್ಷರಾಭ್ಯಾಸ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ವಾದ್ಯ ಸಂಗೀತ (ಕೊಳಲು, ವೀಣೆ, ಪಿಟೀಲು, ಚೆಂಡೆ, ಮೃದಂಗ, ತಬಲಾ ಇತ್ಯಾದಿ) ವಿದ್ಯೆಯನ್ನುಆರಂಭಿಸುವ ಮಕ್ಕಳು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ (9845083736) ತಿಳಿಸಿದ್ದಾರೆ. ಭಾಗವಹಿಸುವ ಮಕ್ಕಳಿಗಾಗಿ ಒಂದುತುದಿ ಬಾಳೆ ಎಲೆ, ಒಂದುಸೇರು ಬೆಳ್ತಿಗೆ ಅಕ್ಕಿ, 2 ತೆಂಗಿನಕಾಗಳನ್ನು ತರಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ದಯಾನಂದಕಟೀಲು ಶಾರದಾ ವಿದ್ಯಾಲಯ (9448545578) ಸುಧಾಕರರಾವ್ ಪೇಜಾವರ, ಕದ್ರಿ ನವನೀತ ಶೆಟ್ಟಿಇವರನ್ನು ಸಂಪರ್ಕಿಸಬಹುದು.