ರಾಷ್ಟ್ರೀಯ

ಮದುವೆಯಾದ 2 ವಾರಕ್ಕೆ ಯುವತಿ ಆತ್ಮಹತ್ಯೆ: ಕಾರಣ ಕಣ್ಣೀರು ತರಿಸುವಂತಿದೆ​!

Pinterest LinkedIn Tumblr


ಹೈದರಾಬಾದ್​: ಮದುವೆಯಾಗಿ ಕೇವಲ 2 ವಾರಕ್ಕೆ ನವವಧು ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ವಾರಂಗಲ್​ ನಗರ ಜಿಲ್ಲೆಯ ನಾರಾಯಣಗಿರಿಯಲ್ಲಿ ನಡೆದಿದೆ.

ರಾವಲಿ ಹೆಸರಿನ ಯುವತಿಗೆ ಡಿಸೆಂಬರ್​ 11ರಂದು ಭಿಮದೇವರ ಪಲ್ಲಿ ಮಂಡಲದ ಗಾಂಧಿನಗರ ನಿವಾಸಿ ಐಲಾಬೊಯಿನಾ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ರಾವಲಿಗೆ ಮದುವೆ ಇಷ್ಟವಿರಲಿಲ್ಲ. ಕಾರಣ ಆಕೆ ಮತ್ತೊಬ್ಬ ಯುವಕ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು.

ರಾವಲಿ ಕುಟುಂಬ ಮದುವೆ ಪ್ರಸ್ತಾಪ ಮಾಡಿದಾಗಲೇ ಯುವಕನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಳು. ಆದರೆ, ಪ್ರೀತಿಯನ್ನು ಒಪ್ಪದ ರಾವಲಿ ಕುಟುಂಬ ವಿರೋಧದ ಹೊರತಾಗಿಯೂ ವರನನ್ನು ಹುಡುಕುವ ಕೆಲಸಕ್ಕೆ ಕೈಹಾಕಿತ್ತು. ಕೊನೆಗೂ ವರನನ್ನು ಹುಡುಕಿ ಡಿ. 11ರಂದು ಮದುವೆಯನ್ನು ನಿಶ್ಚಯ ಮಾಡಿ, ತರಾತುರಿಯಲ್ಲೇ ಮಗಳಿಗೆ ಬಲವಂತದಿಂದ ಮದುವೆ ಮಾಡಿದರು.

ಆದರೆ, ತನ್ನ ಬಾಯ್​ಫ್ರೆಂಡ್​ ಮರೆಯಲು ಸಾಧ್ಯವಾಗದ ರಾವಲಿ ಮಾನಸಿಕವಾಗಿ ನೊಂದಿದ್ದಳು. ಮದುವೆಯಾದರೂ ತನ್ನ ಪತಿಯೊಂದಿಗೆ ಇರಲಾಗದಷ್ಟು ನೋವಾಗಿತ್ತು. ಲವ್ವರ್​ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ರಾವಲಿ ಡೆತ್​ನೋಟ್​ ಬರೆದಿಟ್ಟು ಮದುವೆಯಾದ ಎರಡೇ ವಾರದಲ್ಲಿ ತನ್ನ ಬದುಕಿಗೆ ತಾನೇ ಅಂತ್ಯವಾಡಿದ್ದಾಳೆ.

ಡೆತ್​ನೋಟ್​ನಲ್ಲಿ ತನ್ನ ಮನಸ್ಸಿನ ತುಮುಲವನ್ನು ಹೊರಹಾಕಿರುವ ರಾವಲಿ, ಅಮ್ಮ… ನನ್ನನ್ನು ಕ್ಷಮಿಸು. ಸಂತೋಷದಿಂದಲೇ ಮದುವೆಯಾದೆ. ಆದರೆ, ಈ ಮದುವೆ ನನಗೆ ಇಷ್ಟವಿರಲಿಲ್ಲ. ನನ್ನ ಮನಸ್ಸಿನಲ್ಲಿ ಬೇರೋಬ್ಬನಿದ್ದ ಎಂಬುದು ನಿಮಗೆ ತಿಳಿದಿತ್ತು. ಆದರೂ ನನಗೆ ಮದುವೆ ಮಾಡಿದಿರಿ. ಪತಿಯೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ನನಗೆ ಇಷ್ಟವಿಲ್ಲ. ಮದುವೆ ನಂತರದ ಪ್ರತಿಯೊಂದು ಕ್ಷಣವೂ ನರಕ ಅನಿಸುತ್ತಿದೆ ಎಂದು ರಾವಲಿ ಡೆತ್​ನೋಟ್​ ಬರೆದಿಟ್ಟಿದ್ದಾಳೆ.

Comments are closed.