ರಾಷ್ಟ್ರೀಯ

ಮದುವೆಗೂ ಮೊದಲು ಭಿತ್ತಿಪತ್ರ ಪ್ರದರ್ಶಿಸಿ ರೈತರ ಹೋರಾಟವನ್ನು ಬೆಂಬಲಿಸಿದ ವರ

Pinterest LinkedIn Tumblr


ಅಮೃತಸರ: ಅಮೃತಸರದ ಮದುಮಗನೊಬ್ಬ ಮದುವೆಗೂ ಮುನ್ನ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾನೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜಧಾನಿ ದೆಹಲಿಯ ಒಳಗೂ ಹೊರಗೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ವಿವಿಧೆಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿರುವ ಅಮೃತಸರದ ಮದುಮಗ ಕಾರಿನ ಮೇಲೆ ರೈತರನ್ನ ಬೆಂಬಲಿಸುವುದಾಗಿ ಭಿತ್ತಿಪತ್ರ ಅಂಟಿಸಿಕೊಂಡು ನವದೆಹಲಿಗೆ ಮದುವೆಗೆ ತೆರಳಿದ್ದಾನೆ.

ಈ ಮಧ್ಯೆ, ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿದ ಆತ ಭಿತ್ತಿಪತ್ರ ಹಿಡಿದು ರೈತರಿಗೆ ಬೆಂಬಲ ಸೂಚಿಸಿದ್ದಾನೆ. ಕುಟುಂಬ ವರ್ಗ ಸಹ ಮದುಮಗನ ಜೊತೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿತು.

ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕೆಂದು ರೈತರು ನಡೆಸುತ್ತಿರುವ ಹೋರಾಟ 19ನೇ ದಿನಕ್ಕೆ ಕಾಲಿಟ್ಟಿದೆ.

Comments are closed.