ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇಂದು, ನಾಳೆ ಸಲ್ಲಲಿದೆ ಪೂಜೆ

Pinterest LinkedIn Tumblr

ಕೊಟ್ಟಾಯಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಸಂಜೆಯಿಂದ ಎರಡು ದಿನಗಳ ಕಾಲ ಕಾನನ ವಾಸನಿಗೆ ವಿಶೇಷ ಪೂಜೆ ಸಲ್ಲಲಿದೆ. ‘ಚಿತಿರಾ ಅತ್ತತಿರುಣಾಳ್’ ಹಬ್ಬದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುರುವಾರ ಸಂಜೆ ತೆರೆಯಲಿದೆ.

ಮುಖ್ಯ ಅರ್ಚಕ ಕೆ ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಸಂಜೆ ಗರ್ಭಗುಡಿಯನ್ನು ತೆರೆಯಲಿದ್ದು, ಮರುದಿನ ಅಂದರೆ ಶುಕ್ರವಾರ ಬೆಳಿಗ್ಗೆ ಪೂಜೆ ವಿಧಿ-ವಿಧಾನಗಳು ಆರಂಭವಾಗಲಿವೆ.

ಅಥಳಪೂಜೆ (ರಾತ್ರಿ ಪೂಜೆ) ನಂತರ ಶುಕ್ರವಾರ ದೇವಾಲಯ ಮುಚ್ಚಲಿದೆ. ಈ ದಿನಗಳಲ್ಲಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿರ್ಭಂದಿಸಲಾಗುತ್ತದೆ.

Comments are closed.