ರಾಷ್ಟ್ರೀಯ

ಬಹುಜನ ಸಮಾಜ ಪಕ್ಷದ ಐವರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ: ಬಿಎಸ್ಪಿಗೆ ಪ್ರಥಮ ಬಾರಿ ದೊಡ್ಡ ಹಿನ್ನಡೆ

Pinterest LinkedIn Tumblr


ನವದೆಹಲಿ: ಬಹುಜನ ಸಮಾಜ ಪಕ್ಷದ ಐವರು ಶಾಸಕರು ರಾಜ್ಯಸಭೆಯ ಉಪ ಚುನಾವಣೆಗೆ ಬಿಎಸ್ಪಿಯ ಅಧಿಕೃತ ಅಭ್ಯರ್ಥಿ ರಾಮ್ಜಿ ಗೌತಮ್ ಅವರ ಬೆಂಬಲವನ್ನು ಹಿಂಪಡೆದ ಕೂಡಲೇ, ಅಸ್ಲಂ ಚೌಧರಿ, ಅಸ್ಲಂ ರೈನಿ, ಮುಜ್ತಾಬಾ ಸಿದ್ದಿಕಿ, ಹಕಮ್ ಲಾಲ್ ಬೈಂಡ್ ಮತ್ತು ಗೋವಿಂದ್ ಜಾತವ್ ನೇರವಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ಕಚೇರಿಗೆ ತೆರಳಿದರು.

ಬಿಎಸ್ಪಿ ಇಂತಹ ದೊಡ್ಡ ಹಿನ್ನಡೆ ಎದುರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಈಗಿನ ರಾಜಕೀಯ ಬೆಳವಣಿಗೆಗಳು ಮುಂಬರುವ 2022 ರಲ್ಲಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎನ್ನಲಾಗಿದೆ.ಮಂಗಳವಾರ, ಸ್ವತಂತ್ರ ಅಭ್ಯರ್ಥಿ, ಪ್ರಕಾಶ್ ಬಜಾಜ್, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ, ನಾಮಪತ್ರ ಸಲ್ಲಿಸಿದ್ದು, ಬುಧವಾರದ ಘಟನೆಗಳ ಮೂಲಕ ಸ್ಪಷ್ಟ ಸೂಚನೆಯನ್ನು ನೀಡಿದೆ.

ಇನ್ನೊಂದೆಡೆಗೆ ಪಕ್ಷದ ವಿರುದ್ಧ ದಂಗೆ ಎದ್ದ ಐದು ಶಾಸಕರಿಗೆ ಹಣದ ಚೀಲದ ‘ಸವಲತ್ತು’ಗಳನ್ನು ನೀಡಲಾಗುತ್ತಿದೆ ಮತ್ತು ದಲಿತ ನಾಯಕ ರಾಮ್ಜಿ ಗೌತಮ್ ಅವರನ್ನು ರಾಜ್ಯಸಭೆಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಬಿಎಸ್ಪಿ ಶಾಸಕ ಉಮಾಶಂಕರ್ ಸಿಂಗ್ ಆರೋಪಿಸಿದ್ದಾರೆ.

Comments are closed.