ರಾಷ್ಟ್ರೀಯ

ನಾಗಾಲ್ಯಾಂಡ್​ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್​ ಆತ್ಮಹತ್ಯೆ

Pinterest LinkedIn Tumblr


ಶಿಮ್ಲಾ: ನಾಗಾಲ್ಯಾಂಡ್​ ರಾಜ್ಯಪಾಲ ಆಶ್ವನಿ ಕುಮಾರ್​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿಮ್ಲಾದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಇವರು ಸಾವನ್ನಪ್ಪಿದ್ದಾರೆ. ಸಿಬಿಐನ ಮಾಜಿ ನಿರ್ದೇಶಕರು ಆಗಿದ್ದ ಅಧಿಕಾರಿ ಸಾವನ್ನಪ್ಪಿರುವ ಬಗ್ಗೆ ಶಿಮ್ಲಾ ಹೆಚ್ಚುವರಿ ಪೊಲೀಸ್​ ಅಧಿಕಾರಿ ಮೋಹಿತ್​ ಚಾವ್ಲಾ ಸ್ಪಷ್ಟಪಡಿಸಿದ್ದಾರೆ. ಇದೊಂದು ಆಘಾತಕಾರಿ ಘಟನೆಯಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಮೃತಪಟ್ಟ ಅಶ್ವನಿ ಕುಮಾರ್​ ಹಿಮಾಚಲ ಪ್ರದೇಶದಲ್ಲಿ ಆಗಸ್ಟ್​ 2006 ರಿಂದ ಜುಲೈ 2008ರವರೆಗೆ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2008ರಿಂದ 2010ರವರೆಗೆ ಸಿಬಿಐ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.

ಸ್ಥಳದಲ್ಲಿ ಸೂಸೈಡ್​ ನೋಟ್​ ಸಿಕ್ಕಿದ್ದು, ಇದರಲ್ಲಿ ಈ ಜೀವನ ಮುಗಿದಿದ್ದು, ಹೊಸ ಜೀವನ ಪ್ರಯಾಣಕ್ಕೆ ಹೊರಟ್ಟಿರುವುದಾಗಿ ಬರೆದಿದ್ದಾರೆ. ಇದನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೇಶದಲ್ಲಿ ಸಂಚಲನ ಮೂಡಿಸಿದ್ದ ಆರೋಷಿ ತಲ್ವಾರ್​ ಹತ್ಯೆ ಪ್ರಕರಣದ ತನಿಖೆಯನ್ನು ಇವರು ನಡೆಸಿದ್ದರು. ಈ ಪ್ರಕರಣ ಸಿಬಿಐಗೆ ಒಪ್ಪಿಸಿದಾಗ ಈ ಸಂಸ್ಥೆ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ತನಿಖೆಗಾಗಿ ಎರಡನೇ ತಂಡವನ್ನು ಅವರು ರಚಿಸಿದ್ದರು.ಈ ತಂಡ ಈ ಪ್ರಕರಣದಲ್ಲಿ ಆರೋಷಿ ಪೋಷಕರೇ ಹತ್ಯೆ ಮಾಡಿದವರು ಎಂದು ವರದಿ ನೀಡಿತು. 2013 ರಿಂದ 2014ರವರೆಗೆ ನಾಗಾಲ್ಯಾಂಡ್​ ರಾಜ್ಯಪಾಲರಾಗಿ ಇವರು ಕಾರ್ಯನಿರ್ವಹಿಸಿದ್ದರು.

Comments are closed.