ನವದೆಹಲಿ: ಹ’ತ್ರಾಸ್ ಅ”ತ್ಯಾ’ಚಾರ ಸಂ’ತ್ರಸ್ತೆಯ ಮನೆಯವರ ಭೇಟಿ ನೀಡಲು ಮಾಧ್ಯಮ ಮತ್ತು ರಾಜಕೀಯ ನಾಯಕರಿಗೆ ಅವಕಾಶ ನೀಡಿ ಎಂದು ಬಿಜೆಪಿ ನಾಯಕಿ ಉಮಾಭಾರತಿ ಧ್ವನಿ ಎತ್ತಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್ಗೆ ಮನವಿ ಮಾಡಿರುವ ಅವರು, ಸಂ’ತ್ರಸ್ತ ಕುಟುಂಬವನ್ನು ಭೇಟಿಯಾಗಲು ಮಾಧ್ಯಮ ಹಾಗೂ ರಾಜಕೀಯ ನಾಯಕರಿಗೆ ಅವಕಾಶ ನೀಡಿ ಎಂದಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಪೊ’ಲೀ”ಸರ ನಿರ್ಧಾರ ಕುರಿತು ಟೀಕಿಸಿರುವ ನಾಯಕಿ, ಅವರ ಕಾರ್ಯಚಾರಣೆ ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಅಲ್ಲದೇ ಹಥ್ರಾಸ್ ಘಟನೆ ಬಿಜೆಪಿ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿರುವ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಸದ್ಯ ರಿಷಿಕೇಶದ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ತಾವು ಹಥ್ರಾಸ್ಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆ ತಾನು ಕೂಡ ಹ’ಥ್ರಾಸ್ಗೆ ತೆರಳಿ ಸಂ’ತ್ರಸ್ತ ಯುವತಿ ಕುಟುಂಬ ಭೇಟಿ ಮಾಡುವೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಹ’ಥ್ರಾಸ್ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಉತ್ತರ ಪ್ರದೇಶ ಪೊ’ಲೀ”ಸರ ನಡೆ ಅನುಮಾನ ಮೂಡಿಸುತ್ತಿವೆ. ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರದ ಆಡಳಿತ ಪಾರದರ್ಶಕವಾಗಿದೆ ಎಂದು ಇದೇ ವೇಳೆ ಅವರು ವಿಶ್ಲೇಷಿಸಿದ್ದಾರೆ.
ಸಂ’ತ್ರಸ್ತ ಯುವತಿ ದಲಿತ ಕುಟುಂಬಕ್ಕೆ ಸೇರಿದವಳು. ಪೊ’ಲೀಶರು ಆತುರಾವಾಗಿ ಆಕೆಯ ಅಂ”ತ್ಯ ಕಾರ್ಯ ಮಾಡಿದ್ದಾರೆ. ಈ ವೇಳೆ ಗ್ರಾಮದಲ್ಲಿ ನಿಷೇ”ಧಾ’ಜ್ಞೆ ಜಾರಿ ಮಾಡಿದ್ದಾರೆ. ಕುಟುಂಬವನ್ನು ಮನೆಯಲ್ಲಿ ಬಂ”ಧಿ’ಸಿದ್ದಾರೆ. ಎಸ್ಐ’ಟಿ ತನಿ’ಖೆ ನಡೆಸುತ್ತಿದ್ದರೆ, ಈ ರೀತಿ ಸಂ’ತ್ರಸ್ತ ಕುಟುಂಬವನ್ನು ಬಂ”ಧಿ’ಸುವ ಬಗ್ಗೆ ನನಗೆ ತಿಳಿದಿಲ್ಲ. ಇದು ಎಸ್’ಐಟಿ ತ’ನಿಖೆಯ ಬಗ್ಗೆ ಮಾತ್ರ ಪ್ರಶ್ನೆ ಹುಟ್ಟು ಹಾಕುತ್ತಿದೆ ಎಂದಿದ್ದಾರೆ.
Comments are closed.