ಹೊಸದಿಲ್ಲಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹೊಸದಿಲ್ಲಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು ರಾಷ್ಟ್ರ ರಾಜಧಾನಿ ಬಳಿಯ ಯಮುನಾ ಎಕ್ಸ್ಪ್ರೆಸ್ ಹೈವೇ ಬಳಿ ಕಾಂಗ್ರೆಸ್ ಯಾತ್ರೆಯನ್ನು ಪೊಲೀಸರು ಮುಂದೆ ಬರದಂತೆ ತಡೆದಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದೆ.
ಈ ವೇಳೇ ಪೊಲೀಸರು ನನ್ನ ಮೇಲೆ ಲಾಠಿ ಬೀಸಿದ್ದಲ್ಲದೇ ನನ್ನನ್ನು ತಳ್ಳಿದರು ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಹೆದ್ದಾರಿಯಲ್ಲಿ ನಮ್ಮ ಯಾತ್ರೆಯನ್ನು ತಡೆದ ಪೊಲೀಸರು ನನ್ನ ಮೇಲೆ ಲಾಠಿ ಬೀಸಿ ದೂರ ತಳ್ಳಿದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ನನ್ನನ್ನು ಮೈದಾನಕ್ಕೆ ದೂಡಿ ಪೊಲೀಸರು ಅಹಂಕಾರ ಪ್ರದರ್ಶಿಸಿದ್ದು, ಈ ದೇಶದಲ್ಲಿ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ರಸ್ತೆಯಲ್ಲಿ ನಡೆಯಬಾರದೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸ್ಥಳದಲ್ಲಿ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.
Comments are closed.