ಕಣ್ಣೂರು: ಕೆಲವೊಮ್ಮೆ ಜತೆಗಿದ್ದ ಫ್ರೆಂಡ್ಸ್ಗಳನ್ನೇ ನಂಬಲು ಹಿಂದು-ಮುಂದು ನೋಡುವ ಕಾಲದಲ್ಲಿ ಫೇಸ್ಬುಕ್ ಮೂಲಕ ಪರಿಚಯವಾದವರನ್ನು ಯೋಚಿಸದೇ ನಂಬುವ ಮುನ್ನ ಒಮ್ಮೆ ಸ್ಟೋರಿ ಓದಿ.
ಬುಡಕಟ್ಟು ಜನಾಂಗದ ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು ಕೇರಳದ ಕಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೆಲಕಮ್ ಪೆರುವಾ ನಿವಾಸಿ ಬಿಬಿನ್ ಎಂದು ಗುರುತಿಸಲಾಗಿದ್ದು, ಕೆಲಕಮ್ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಮಂಡಮ್ಚೇರಿ ನಿವಾಸಿ ಶೋಭಾ ಮೃತದೇಹ ಆಗಸ್ಟ್ 28 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಶವಪರೀಕ್ಷೆ ನಡೆಸಿದ ವೈದ್ಯರು ನೇಣಿಗೆ ಹಾಕಿದ್ದರಿಂದ ಯುವತಿ ಸಾವಿಗೀಡಾಗಿದ್ದಾಳೆಂದು ವರದಿ ನೀಡಿದರು. ಇದೇ ಸುಳಿವಿಟ್ಟುಕೊಂಡ ಪೊಲೀಸರು ಇದರಲ್ಲಿ ಬಿಬಿನ್ ಕೈವಾಡ ಇದೆ ಎಂದು ಅನುಮಾನಗೊಂಡು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಅಂದಹಾಗೆ ಬಿಬಿನ್ ಫೇಸ್ಬುಕ್ ಮೂಲಕ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಆತನನ್ನು ತುಂಬಾ ನಂಬಿದ್ದ ಶೋಭಾ ತನ್ನ ಒಡವೆಗಳನ್ನೆಲ್ಲಾ ಅಡಮಾನ ಇಡಲು ಆತನಿಗೆ ನೀಡಿದ್ದಾಳೆ. ಆದರೆ, ಒಡವೆಗಳನ್ನು ಮರಳಿ ನೀಡಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
Comments are closed.