ರಾಷ್ಟ್ರೀಯ

ತಮಿಳುನಾಡಿನಿಂದ ಶಬರಿಮಲೆಗೆ ತೆರಳುತ್ತಿದ್ದ ಭಕ್ತ ಹೃದಯಾಘಾತದಿಂದ ಸಾವು

Pinterest LinkedIn Tumblr


ಶಬರಿಮಲೆ,(ನ. 26): ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಪಕ್ಕದ ರಾಜ್ಯ ತಮಿಳುನಾಡಿನಿಂದ ಆಗಮಿಸಿದ್ದ ಭಕ್ತನೊಬ್ಬ ಮಾರ್ಗ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದೇಶ್ವರನ್​​(29) ಮೃತಪಟ್ಟ ಭಕ್ತ. ಶಬರಿಮಲೆ ದೇವಾಲಯ ತಲುಪುವ ಮಾರ್ಗ ಮಧ್ಯೆ ಸಿಗುವ ಪವಿತ್ರ ನೀಲಿಮಲೆ ಬೆಟ್ಟವನ್ನು ಏರುವಾಗ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಸನ್ನಿಧಾನಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ಆ ಭಕ್ತ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.

ಯುವ ಭಕ್ತನ ಸಾವಿಗೆ ಹೃದಯಾಘಾತ ಕಾರಣವೇ ಎಂಬ ಶಂಕೆ ಇದೆ. ಹೀಗಾಗಿ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ಏನೆಂಬುದು ಖಚಿತವಾಗಲಿದೆ.

ಇತ್ತ ಜೆಡಿಎಸ್, ಅತ್ತ ಶಿವಸೇನಾ; ಅಂದು ಬಿಎಸ್​ವೈ, ಇಂದು ಫಡ್ನವಿಸ್: ಕಾಂಗ್ರೆಸ್​ಗೆ ‘ಮಹಾ’ ಗೆಲುವು
ಮತ್ತೊಂದು ಪ್ರತ್ಯೇಕ ದುರಂತ ಘಟನೆ ನಡೆದಿದೆ. ಮರಕೂಟಂ-ಚಂದ್ರನಂದನ ಮಾರ್ಗದಲ್ಲಿ ಭಕ್ತರು ಹೋಗುತ್ತಿದ್ದ ವೇಳೆ ಮರವೊಂದು ಬಿದ್ದಿದೆ. ಈ ಘಟನೆಯಲ್ಲಿ 11 ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಗಾಯಗೊಂಡಿದ್ದಾರೆ. ಅವರಲ್ಲಿ 6 ಜನರ ಸ್ಥಿತಿ ತೀವ್ರ ಗಂಭೀರವಾಗಿದೆ. ಈ ಘಟನೆ ಮಧ್ಯರಾತ್ರಿ 2 ಗಂಟೆಯಲ್ಲಿ ಸಂಭವಿಸಿದೆ.

ಯಾತ್ರಾರ್ಥಿಗಳು ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಘಟನೆಯಿಂದ ಎಲೆಕ್ಟ್ರಿಕ್​​ ಮತ್ತು ಟೆಲಿಫೋನ್​ ಸಂಪರ್ಕ ಸ್ಥಗಿತಗೊಂಡಿತ್ತು.

ಎನ್​ಡಿಆರ್​ಎಫ್ ಮತ್ತು ತುರ್ತು ಕಾರ್ಯಾಚರಣೆ​​ ಸಿಬ್ಬಂದಿಯ ಸಹಾಯದಿಂದ ರಸ್ತೆಗೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಗಾಯಾಳುಗಳನ್ನು ಪಂಬಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗಂಭೀರಗೊಂಡಿರುವ 6 ಮಂದಿಯನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಬರಿಮಲೆ ದೇಗುಲದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಡಲಂ-ಮಕರವಿಲಕ್ಕು ಪೂಜೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕೇರಳ ಮಾತ್ರವಲ್ಲದೇ, ಪಕ್ಕದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಲಕ್ಷಾಂತರ ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.

Comments are closed.