ರಾಷ್ಟ್ರೀಯ

ಮಾಜಿ ಕೇಂದ್ರ ಸಚಿವ ಪಿ .ಚಿದಂಬರಂಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Pinterest LinkedIn Tumblr

ಹೊಸದಿಲ್ಲಿ : ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಶುಕ್ರವಾರದಂದು ಜಾಮೀನು ನಿರಾಕರಿಸಿದೆ.

ಚಿದಂಬರಂ ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಪುರಾವೆಗಳು ದಾಖಲೆ ರೂಪದಲ್ಲಿದ್ದು, ಇದು ತನಿಖಾ ಏಜೆನ್ಸಿಗಳ ವಶದಲ್ಲಿದೆ. ಅದನ್ನು ನಾನು ನಾಶಪಡಿಸಲಾರೆ. ಹೀಗಾಗಿ ತನಗೆ ಜಾಮೀನು ನೀಡಬೇಕೆಂದು 74ರ ಹರೆಯದ ಕಾಂಗ್ರೆಸ್‌ನ ಹಿರಿಯ ನಾಯಕ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಜಾಮೀನು ನೀಡಿಕೆಗೆ ಆಕ್ಷೇಪ ಸಲ್ಲಿಸಿದ ಜಾರಿ ನಿರ್ದೇಶನಾಲಯ(ಈ.ಡಿ.), ಚಿದಂಬರಂ ಅವರು ಪ್ರಭಾವ ಬೀರಲು ಪ್ರಯತ್ನಿಸುವ ಜೊತೆಗೆ ಸಾಕ್ಷಿಗಳನ್ನು ಬೆದರಿಸುತ್ತಾರೆ ಎಂದುಹೇಳಿತು.

Comments are closed.