ಕೋಲ್ಕತ್ತಾ, [ಅ.10]: ಆರ್ಎಸ್ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಬೊಂಧು ಪ್ರಕಾಶ್ ಪಲ್ ಕೊಲೆಯಾದ ಆರ್ಎಸ್ಎಸ್ ಕಾರ್ಯಕರ್ತ. ಪ್ರಕಾಶ್ ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು, ಆರ್ಎಸ್ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು. ಪ್ರಕಾಶ್ (35), 8 ತಿಂಗಳ ಗರ್ಭಿಣಿ ಬ್ಯೂಟಿ ಪಾಲ್ (28) ಹಾಗೂ ಅಂಗನ್ ಪಾಲ್ (6) ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕಾಶ್ ಮಾರುಕಟ್ಟೆಯಿಂದ ಕನೈಗಂಜ್-ಲೆಬುತಲದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ ಒಂದು ಗಂಟೆಯಲ್ಲಿಯೇ ಇಡೀ ಕುಟುಂಬ ಶವವಾಗಿದೆ ಪತ್ತೆಯಾಗಿದೆ.
ಪ್ರಕಾಶ್ ಹಾಗೂ ಮಗುವಿನ ಮೃತದೇಹ ಕೋಣೆಯೊಳಗೆ ಪತ್ತೆಯಾಗಿದ್ದು, ಮಹಿಳೆ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
11:15ಕ್ಕೆ ಪ್ರಕಾಶ್ ಹಾಗೂ ಮಗ ಅಂಗನ್ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದರು. ಕೆಲವೇ ಸೆಕೆಂಡ್ಗಳಲ್ಲಿ ಸಂಪರ್ಕ ಕಡಿತವಾಯಿತು. ಆ ಬಳಿಕ ಕೊಲೆ ನಡೆದಿರಬಹುದು ಎಂದು ಪ್ರಕಾಶ್ ಪ್ರಕಾಶ್ ಸಂಬಂಧಿ ರಾಜೇಶ್ ಘೋಷ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕೊಲೆಗಾರರ ಸುಳಿವಿಗಾಗಿ ಪ್ರಕಾಶ್ ಕುಟುಂಬದೊಂದಿಗೆ ಮಾತನಾಡಿ ವೈಯಕ್ತಿಕ ಮಾಹಿತಿ ಕಲೆ ಹಾಕಲಾಗಿದೆ ಎಂದು ಲಾಲ್ಬಾಗ್ ವಿಭಾಗೀಯ ಪೊಲೀಸ್ ಅಧಿಕಾರಿ ಬರೂನ್ ಬೈದ್ಯ ತಿಳಿಸಿದ್ದಾರೆ.
ಈ ಮಧ್ಯೆ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾದರೆ ಹೋರಾಟ ನಡೆಸುವುದಾಗಿ ಶಿಕ್ಷಕರ ಸಂಘಟನೆ ಎಚ್ಚರಿಸಿದೆ.
Comments are closed.