ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಮೇರು ಪ್ರತಿಭೆಯಾಗಿದ್ದ ಗಿರೀಶ್ ಕಾರ್ನಾಡ್ ಸೋಮವಾರ ಅಸುನೀಗಿದ್ದಾರೆ. ಕಾರ್ನಾಡ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
Girish Karnad will be remembered for his versatile acting across all mediums. He also spoke passionately on causes dear to him. His works will continue being popular in the years to come. Saddened by his demise. May his soul rest in peace.
— Narendra Modi (@narendramodi) June 10, 2019
“ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗಿರೀಶ್ ಕಾರ್ನಾಡ್ ಅವರನ್ನು ಅವರ ಬಹುಮುಖಿ ಪ್ರತಿಭೆಯ ಖಾರಣ ಸ್ಮರಿಸಿಕೊಳ್ಳುತ್ತೇನೆ. ತಮಗೆ ಇಷ್ಟವಾದ ವಿಚಾರದ ಬಗೆಗೆ ಅವರು ಬಹಳ ಉತ್ಕಟತೆಯಿಂದ ಮಾತನ್ನಾಡುತ್ತಿದ್ದರು.ಅವರ ಕೆಲಸಗಳು ಹಲವಾರು ವರ್ಷಗಳ ಕಾಲ ಜನರ ನೆನಪಲ್ಲಿ ಉಳಿಯಲಿದೆ. ಅವರ ಸಾವಿನಿಂದ ದುಃಖವಾಗಿದೆ.ಅವರ ಆತ್ಮಕ್ಕೆ ಶಾಂತಿ ದೊರಕಲಿ” ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಾರ್ನಾಡರು ಸೋಮವಾರ ಬೆಳಿಗ್ಗೆ ಬೆಂಗಳೂರಿನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
Comments are closed.