ರಾಷ್ಟ್ರೀಯ

ಮಾಜಿ ಮುಖ್ಯಮಂತ್ರಿಯ ಪುತ್ರ ರೋಹಿತ್ ಶೇಖರ್ ತಿವಾರಿ ಅನ್ಯ ಮಹಿಳೆ ಜೊತೆ ಸಂಬಂಧ ಹೊಂದಿದ್ದರು: ಪತ್ನಿ ಕುಟುಂಬ ಸದಸ್ಯರ ಆರೋಪ

Pinterest LinkedIn Tumblr


ನವದೆಹಲಿ: ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಪುತ್ರ ರೋಹಿತ್ ಶೇಖರ್ ಹತ್ಯೆ ವಿಚಾರವಾಗಿ ದಿನಕ್ಕೊಂದು ಸುದ್ದಿ ಹೊರಬಿಳುತ್ತಿದ್ದು, ಈಗ ಅವರ ಕೊಲೆ ಆರೋಪದ ಮೇಲೆ ಬಂಧಿತರಾಗಿರುವ ಪತ್ನಿ ಅಪೂರ್ವ ಶುಕ್ಲಾ ಕುಟುಂಬ ಸದಸ್ಯರು ರೋಹಿತ್ ಗೆ ಅನ್ಯ ಮಹಿಳೆಯ ಜೊತೆ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ.

ಈಗ ಜೀ ನ್ಯೂಸ್ ಗೆ ಪ್ರತಿಕಿಯಿಸಿರುವ ಅಪೂರ್ವ ತಾಯಿ ಮಂಜುಳಾ ಶುಕ್ಲಾ ” ರೋಹಿತ್ ಗೆ ಅನ್ಯ ಮಹಿಳೆ ಜೊತೆ ಅನೈತಿಕ ಸಂಬಂಧವಿತ್ತೆ ಹೊರತು ಗಂಡ ಹೆಂಡತಿ ನಡುವೆ ಯಾವುದೇ ಕಲಹವಿರಲಿಲ್ಲ, ಈಗ ನನ್ನ ಮಗಳ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದರು. ಕೆಲ ದಿನಗಳ ಹಿಂದೆ ಮನೆಯಲ್ಲಿ ರೋಹಿತನ ಯೋಗಕ್ಷೇಮಕ್ಕಾಗಿ ಪೂಜೆಯನ್ನು ಆಯೋಜಿಸಲಾಗಿತ್ತು.ಈಗ ಮಗಳ ಬಂದಿರುವ ಆರೋಪವು ಪಿತೂರಿಯಾಗಿದೆ ಎಂದು ಹೇಳಿದರು.ಇದೇ ವೇಳೆ ಅಪೂರ್ವ ಮತ್ತು ರೋಹಿತ್ ಅವರು ಗಂಭೀರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಖಂಡದದ ಮುಖ್ಯಮಂತ್ರಿ ಎನ್ಡಿ ತಿವಾರಿಯ ಪುತ್ರ ರೋಹಿತ್ ಶೇಖರ್ ಏಪ್ರಿಲ್ 15-16 ರ ಮಧ್ಯರಾತ್ರಿಯಲ್ಲಿ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ವೈದಕೀಯ ಪರೀಕ್ಷೆ ದೃಢಪಡಿಸಿತ್ತು. ದೆಹಲಿ ಕ್ರೈಂ ಬ್ರಾಂಚ್ ನ ಪೊಲೀಸರು ಸುಪ್ರೀಂಕೋರ್ಟ್ ನಲ್ಲಿ ವಕೀಲೆಯಾಗಿರುವ ರೋಹಿತ್ ಪತ್ನಿ ಅಪೂರ್ವ ಶುಕ್ಲಾ ಅವರೇ ಪತಿ ರೋಹಿತ್ ರನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆವೇಳೆ ಸಂಶಯ ವ್ಯಕ್ತಪಡಿಸಿದ್ದರು.

Comments are closed.