ರಾಷ್ಟ್ರೀಯ

ನಮಗೆ ಇಬ್ಬರು ಪ್ರಧಾನಿಗಳು ಬೇಕಾ? ಬಾಗಲಕೋಟೆಯಲ್ಲಿ ಮೋದಿ

Pinterest LinkedIn Tumblr


ಬೆಳಗಾವಿ: ಸರ್ಜಿಕಲ್, ಏರ್ ಸ್ಟ್ರೈಕ್ ಅನ್ನು ಒಪ್ಪಲು ಕಾಂಗ್ರೆಸ್ ಸಿದ್ಧವಿಲ್ಲ. ನಾವು ದಾಳಿ ಮಾಡಿದರೆ ಇಲ್ಲಿನವರು ಕೆಲವರು ಅಳುತ್ತಾರೆ. ಕಾಂಗ್ರೆಸ್ ಜೆಡಿಎಸ್ ವೋಟ್ ಬ್ಯಾಂಕ್ ಬಾಲಾಕೋಟ್ ನಲ್ಲಿದೆಯಾ ಅಥವಾ ಬಾಗಲಕೋಟೆಯಲ್ಲಿದೆಯಾ? ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ ಬಂದಾಗ ವಿಭಜನೆ ರಾಜಕೀಯ ಮಾಡಲು ಮುಂದಾಗುತ್ತದೆ. ಅದಕ್ಕಾಗಿಯೇ ದೇಶದಲ್ಲಿ ಇಬ್ಬರು ಪ್ರಧಾನಿಗಳು ಬೇಕೆ ಎನ್ನುವವರಿಗೆ ಸಾಥ್ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅವರು ಗುರುವಾರ ಬಾಗಲಕೋಟೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕಾ ಪ್ರಧಾನಮಂತ್ರಿ ಬೇಕಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಕೆಲಸ ಮಾಡುತ್ತಿದೆ ಎಂದರು.

ಕರ್ನಾಟಕದಲ್ಲಿ ಭಾವನಾತ್ಮಕ, ದ್ವೇಷಪೂರಿತ ನಾಟಕಗಳು ನಡೆಯುತ್ತಿದೆ. ಇಂತಹ ನಾಟಕದ ಮೂಲಕ ಅಭಿವೃದ್ಧಿ ಸ್ಥಗಿತವಾಗಿದೆ. ಇದು ಯಾವುದಕ್ಕೂ ಸರ್ಕಾರದ ಬಳಿ ಸಮಯವಿಲ್ಲ. ಕಾಂಗ್ರೆಸ್ ಗೆ ಇಂತಹ ಸರ್ಕಾರವೇ ಬೇಕಾಗಿದೆ. ಇಂತಹ ಅಸಮರ್ಥ ಮುಖ್ಯಮಂತ್ರಿಯೇ ಬೇಕಾಗಿದ್ದಾರೆ. ರಾಜ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ದೋಚಿಕೊಳ್ಳಲು ಮುಂದಾಗಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಭಾವನಾತ್ಮಕ ಮಾತುಗಳ ಮೇಲೆ ಕಣ್ಣೀರು ಸುರಿಸುತ್ತಾರೆ. ರೈತರ ಸಾಲಮನ್ನಾ, ಬರಪರಿಹಾರ ನಿಧಿ ಏನಾಗಿದೆ? ಕಬ್ಬು ಬೆಳೆಗಾರರ ಬಗ್ಗೆ ಏನು ಯೋಜನೆ ಮಾಡಿದ್ದೀರಿ? ಸಿಎಂ ಕಣ್ಣೀರು ಹಾಕುತ್ತಿದ್ದರೆ, ಸಚಿವರು ಹಗರಣದಲ್ಲಿ ತೊಡಗಿದ್ದಾರೆ ಎಂದು ದೂರಿದರು.

Comments are closed.