ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರರ ಮತ್ತೆ ಅಟ್ಟಹಾಸ; 27 ಯೋಧರು ಹುತಾತ್ಮ

Pinterest LinkedIn Tumblr

ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್​ ದಾಳಿಯಲ್ಲಿ 27 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ನಲ್ವತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.

ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್​ಪಿಎಫ್​ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್​ ಬಾಂಬ್​ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಈ ದಾಳಿ ಜವಾಬ್ದಾರಿ ಹೊತ್ತುಕೊಂಡಿದೆ.

ಕಾರನ್ನು ಓಡಿಸಿಕೊಂಡು ಬಂದ ವ್ಯಕ್ತಿ 55 ಜನರ ಕೂರಬಹುದಾದ ಸಿಆರ್​ಪಿಎಫ್​ ಬಸ್​ ಬಳಿ ಸ್ಫೋಟಿಸಿದ ಎಂದು ಪುಲ್ವಾಮ ಜಿಲ್ಲೆಯ ಸ್ಥಳೀಯರಾದ ಅಹಮದ್​ ಅಲಿಯಾಸ್ ವಾಕ್ವರ್​ ಹೇಳುತ್ತಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ದಾಳಿ ನಡೆದ ನಂತರ ಜಮ್ಮುವಿನಿಂದ ಶ್ರೀನಗರದ ಕಡೆ ಬಂದೂಕು ಮತ್ತು ಗ್ರನೈಡ್​ ಸ್ಫೋಟದ ಶಬ್ದ ಕೇಳಿಬಂದಿದೆ.

Comments are closed.