ರಾಷ್ಟ್ರೀಯ

ನೆರೆಹೊರೆ ಮನೆಯವರ ಜೊತೆಗಿನ ಜಗಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr


ನವದೆಹಲಿ: ಪಕ್ಕದ ಮನೆಯ ಮಹಿಳೆಯನ್ನು ಚಾಕುವಿನಿಂದ ಹತ್ಯೆ ಮಾಡಲಾಗಿದ್ದು, ಆಕೆಯ ಗಂಡ ಮತ್ತು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಪಶ್ಚಿಮ ದೆಹಲಿಯಲ್ಲಿ ನಡೆದಿದೆ. ಆರೋಪಿಯನ್ನು ಆರೋಪಿಯನ್ನು ಮೊಹಮ್ಮದ್ ಆಜಾದ್ ಎಂದು ಗುರುತಿಸಲಾಗಿದೆ. ಅವನು ಹಲವಾರು ಬಾರಿ ಕುಟುಂಬ ಸದಸ್ಯರ ಮೇಲೆ ಚಾಕು ಬಳಸುತ್ತಿದ್ದನು ಎಂಬ ಮಾಹಿತಿ ದೊರೆತಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸುನೀತಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರು 41 ವರ್ಷದ ವೀರು ಮತ್ತು ಆಕಾಶ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸುಮಾರು 07:30 ರ ಸಮಯದಲ್ಲಿ ಸುನಿತಾ ಮತ್ತು ಆರೋಪಿಯ ನಡುವೆ ಜಗಳ ನಡೆದಿದೆ. ಸುನಿತಾ ಈ ಮಾಹಿತಿಯನ್ನು ತನ್ನ ಪತಿ ಮತ್ತು ಮಗನಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದೊಡನೆ ಅವರು ಸ್ಥಳಕ್ಕೆ ತಲುಪಿದ್ದಾರೆ. ಬಳಿಕ ಆರೋಪಿ ಹಲವು ಬಾರಿ ಚಾಕು ಹಿಡಿದು ತನ್ನ ಜಗಳ ಮುಂದುವರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳ. ಫೋಟೋ: ANI

ಸಂತ್ರಸ್ತರನ್ನು ತಕ್ಷಣ ಹತ್ತಿರದ ಗುರು ಗೋವಿಂದ ಸಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುನಿತಾ ಅವರನ್ನು ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಆಕೆಯ ಪತಿ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಘಟನೆ ಬಳಿಕ ಮೊಹಮ್ಮದ್ ಆಜಾದ್ ಕುಟುಂಬ ತಲೆ ಮರೆಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬವು ಖಯಾಲಾದ ಡಿಡಿಎ ಕಾಲೋನಿಯಲ್ಲಿ ಬಾಡಿಗೆಗೆ ವಾಸವಾಗಿತ್ತು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಗಳಕ್ಕೆ ಕಾರಣವೇನು ಎಂಬುದನ್ನು ತನಿಕೆ ನಡೆಸುತ್ತಿದ್ದಾರೆ.

Comments are closed.