ರಾಷ್ಟ್ರೀಯ

ಅಯೋಧ್ಯೆಯಲ್ಲಿ ಇಂದು ಶೌರ್ಯ ದಿವಸ ಆಚರಣೆ

Pinterest LinkedIn Tumblr


ಅಯೋಧ್ಯೆ: ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು (ಡಿ.6) ಶೌರ್ಯ ದಿವಸ ಎಂದು ಆಚರಿಸಲು ವಿಶ್ವ ಹಿಂದೂ ಪರಿಷತ್‌ ನಿರ್ಧರಿಸಿದ್ದು, ಅಯೋಧ್ಯೆಯಲ್ಲಿ ಹಿಂದೂ ಸಂಘಟನೆಗಳ ಮತ್ತೊಂದು ಸುತ್ತಿನ ಬಲಪ್ರದರ್ಶನ ಗುರುವಾರ ನಡೆಯಲಿದೆ. ಹೋಮ-ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭೆಗಳನ್ನು ವಿಹಿಂಪ ಆಯೋಜಿಸಿದೆ.

ಇದರ ಜತೆಗೆ ಬಜರಂಗ ದಳವು ‘ವಿಜಯ್‌ ದಿವಸ್‌’ ಹೆಸರಿನಲ್ಲಿ ನಾನಾ ಕಾರ‍್ಯಕ್ರಮಗಳನ್ನು ನಡೆಸಲಿದೆ. ಅಯೋಧ್ಯೆಯ ಮನೆ/ಮಂದಿರ/ಆಶ್ರಮಗಳ ಮುಂದೆ ದೀಪ ಬೆಳಗುವಂತೆ ವಿಹಿಂಪ ರಾಮಭಕ್ತರಿಗೆ ಕರೆಕೊಟ್ಟಿದೆ. ಹೀಗಾಗಿ ಇಡೀ ಪಟ್ಟಣ ದೀಪಗಳಿಂದ ಕಂಗೊಳಿಸಲಿದೆ. ಶೌರ್ಯ ದಿವಸ್‌ಗೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ಕರಾಳ ದಿನ ಆಚರಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಕ್ಷಿಪ್ರ ಕಾರ್ಯಪಡೆ, ಸಿಆರ್‌ಪಿಎಫ್‌ ಪಡೆಗಳೂ ಬೀಡುಬಿಟ್ಟಿವೆ.

ರಾಮ ಮಂದಿರ ಚಳುವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ 1992ರ ಡಿ.6ರಂದು ಅಯೋಧ್ಯೆಯಲ್ಲಿ ವಿವಾದಿತ ಬಾಬ್ರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು.

ಗುರುವಾರ ಏನೆಲ್ಲಾ ಕಾರ‍್ಯಕ್ರಮ

* ಹೋಮ, ಹವನ ಆಯೋಜನೆ, ಸರಸ್ವತಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ.

* ರಾಮ ಮಂದಿರದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಕರಸೇವಕರಿಗೆ ಗೌರವ.

Comments are closed.