ರಾಷ್ಟ್ರೀಯ

ಅಖ್ಲಾಕ್ ಪ್ರಕರಣದ ತನಿಖೆ ನಡೆಸುತ್ತಿದ್ದ ಕಾರಣಕ್ಕೆ ಬುಲಂದಶಹರ್ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ: ಸಹೋದರಿಯ ಹೇಳಿಕೆ

Pinterest LinkedIn Tumblr

ಬುಲಂದಶಹರ್: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ಗೋಹತ್ಯೆ ವದಂತಿಗೆ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಸಹೋದರಿ ಉತ್ತರ ಪ್ರದೇಶ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯ ಸಹೋದರಿ, “ನನ್ನ ಸಹೋದರ ಅಖ್ಲಾಕ್ ಪ್ರಕರಣದ ತನಿಖೆ ನಡೆಸುತ್ತಿದ್ದ, ಆದ್ದರಿಂದಲೇ ಆತನನ್ನು ಹತ್ಯೆ ಮಾಡಲಾಗಿದೆ. ಪೊಲೀಸರೇ ಇದಕ್ಕೆ ಷಡ್ಯಂತ್ರ ರೂಪಿಸಿದ್ದಾರೆ. ನನ್ನ ಸಹೋದರನನ್ನು ಹುತಾತ್ಮ ಎಂದು ಘೋಷಿಸುವಂತೆ ಪೊಲೀಸ್ ಅಧಿಕಾರಿಯ ಸಹೋದರಿ ಆಗ್ರಹಿಸಿದ್ದಾರೆ.

“ನಮಗೆ ಪರಿಹಾರದ ಹಣ ಬೇಕಿಲ್ಲ ನನ್ನ ಸಹೋದರನನ್ನು ಹುತಾತ್ಮ ಎಂದು ಘೋಷಿಸಿ, ಉತ್ತರ ಪ್ರದೇಶ ಸಿಎಂ ಯಾವಾಗಲೂ ದನಗಳ ಬಗ್ಗೆಯೇ ಮಾತನಾಡುತ್ತಾರೆ, ದನ… ದನ… ದನ… ಎನ್ನುತ್ತಲೇ ಇರುತ್ತಾರೆ ಎಂದು ಪೊಲೀಸ್ ಅಧಿಕಾರಿಯ ಸಹೋದರಿ ಹೇಳಿದ್ದಾರೆ.

Comments are closed.