ರಾಷ್ಟ್ರೀಯ

ಮೋದಿ ಉದ್ಯಮಿ ಅನಿಲ್ ಅಂಬಾನಿ ಕಾವಲುಗಾರ: ರಾಹುಲ್ ಗಾಂಧಿ

Pinterest LinkedIn Tumblr


ಧೋಲ್‌ಪುರ: ಪ್ರಧಾನಿ ಮೋದಿ ಅವರು ಉದ್ಯಮಿ ಅನಿಲ್ ಅಂಬಾನಿ ಕಾವಲುಗಾರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಚಾಯಿಸಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಧೋಲ್‌ಪುರ ಮತ್ತು ಭರತ್ಪುರದ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ರಾಹುಲ್, 2014ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತನ್ನಾಡುತ್ತಿದ್ದ ಮೋದಿ ತಾವು ಪ್ರಧಾನಿ ಅಲ್ಲ, ಚೌಕಿದಾರ (ಕಾವಲುಗಾರ) ಆಗಲು ಬಯಸುವುದಾಗಿ ಹೇಳಿದ್ದರು, ಆದರೆ ಯಾರ ಚೌಕಿದಾರ ಎಂದು ಹೇಳಿರಲಿಲ್ಲ. ಅವರು ದೇಶದ ಕಾವಲುಗಾರರಲ್ಲ, ಬದಲಾಗಿ ಅನಿಲ್ ಅಂಬಾನಿ ಕಾವಲುಗಾರರು ಎಂಬುದೀಗ ಸ್ಪಷ್ಟವಾಗಿದೆ ಎಂದರು.

ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿ ಸಾಮಾನ್ಯರ ಕೈಗೆ ಪೊರಕೆ ಹಿಡಿಸುವ ಮೋದಿ , ಶ್ರೀಮಂತರು ಬ್ಯಾಂಕ್ ಹಣವನ್ನು ಗುಡಿಸಿಕೊಂಡು ಹೋಗುವಾಗ ಸುಮ್ಮನಿರುತ್ತಾರೆ, ಅದಕ್ಕೆ ಅವಕಾಶ ನೀಡುತ್ತಾರೆ ಎಂದವರು ಅಣಕಿಸಿದರು.

ತಮ್ಮ ಭಾಷಣದಲ್ಲಿ ರಾಹುಲ್, ನೋಟು ಅಮ್ಯಾನೀಕರಣ, ರಫೇಲ್ ಒಪ್ಪಂದ, ಜಿಎಸ್‌ಟಿ, ಭ್ರಷ್ಟಾಚಾರ, ನಿರುದ್ಯೋಗ, ರೈತ ಸಮಸ್ಯೆಗಳನ್ನಿಟ್ಟುಕೊಂಡು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.

Comments are closed.