ರಾಷ್ಟ್ರೀಯ

ಮಲ್ಯ ಪ್ರಕರಣದಲ್ಲಿ ಸಡಿಲ ನೀತಿ ಅನುಸರಿಸಿಲ್ಲ: ಎಸ್‌ಬಿಐ

Pinterest LinkedIn Tumblr


ಹೊಸದಿಲ್ಲಿ: ಬಹುಸಾವಿರ ಕೋಟಿ ರೂ. ಸಾಲವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಪ್ರಕರಣದಲ್ಲಿ ದೂರು ದಾಖಲಿಸಲು ಮತ್ತು ಇತರ ಪ್ರಕ್ರಿಯೆ ಕೈಗೊಳ್ಳಲು ಯಾವುದೇ ವಿಳಂಬ ಮಾಡಿಲ್ಲ ಎಂದು ಎಸ್‌ಬಿಐ ಹೇಳಿದೆ.

ಸಾಲವಂಚನೆ ಪ್ರಕರಣದಲ್ಲಿ ಮಲ್ಯ ಪರಾರಿಯಾಗಲು ಬ್ಯಾಂಕ್‌ಗಳ ವಿಳಂಬ ಧೋರಣೆಯೇ ಕಾರಣ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಎಸ್‌ಬಿಐ, ಮಲ್ಯ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಆ ಬಗ್ಗೆ ಯಾವುದೇ ವಿಳಂಬ ಅನುಸರಿಸಿಲ್ಲ. ಬ್ಯಾಂಕ್‌ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗಿದೆ. ಮಲ್ಯ ಪರಾರಿಯಾಗಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪಗಳು ಸುಳ್ಳು ಎಂದು ಹೇಳಿದೆ.

ಮಾರ್ಚ್‌ 2, 2016ರಂದು ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದು, ಅದಾದ ನಾಲ್ಕು ದಿನಗಳ ನಂತರ 13 ಬ್ಯಾಂಕ್‌ಗಳು ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿ, ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಾಲ ವಸೂಲಾತಿಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿಕೊಂಡಿದ್ದವು. ಆದರೆ ಅದಾಗಲೇ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದು, ಬ್ಯಾಂಕ್‌ಗಳು ನಂತರ ಎಚ್ಚೆತ್ತುಕೊಂಡಿವೆ ಎಂದು ಆರೋಪಿಸಲಾಗಿದೆ.

17 ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ ಒಟ್ಟಾರೆ 9,000 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Comments are closed.