ರಾಷ್ಟ್ರೀಯ

ಕರುಣಾನಿಧಿಯವರ ಸಹಿ ಹಿಂದಿನ ಆಸಕ್ತಿಕರ ವಿಷಯ

Pinterest LinkedIn Tumblr


ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಎಲ್ಲರ ಗಮನ ಸೆಳೆದಿತ್ತು, ಅದರ ಹಿಂದೆ ವಿಶೇಷವಿದೆ. ಅದರಲ್ಲಿ ವಿಶೇಷ ಸಂದೇಶವಿದೆ, ತಮ್ಮ ಗೋಪಾಲಪುರಂ ನಿವಾಸವನ್ನು ಅಣ್ಣೈ ಅಂಜುಗಂ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿದ್ದ ವೇಳೆ ಸಹಿ ಮಾಡುವಾಗ ಸಹಿಯ ಹಿಂದಿನ ವಿಶೇಷತೆಯನ್ನು ಬಹಿರಂಗಪಡಿಸಿದ್ದರು.
ಹಾಳೆಗಳಲ್ಲಿ ಅವರ ಸಹಿಯನ್ನು ಲಗತ್ತಿಸುವಂತೆ ಹೇಳುತ್ತಿದ್ದಾಗ ಅವರ ಹಿಂದಿನ ದಿನಗಳ ನೆನಪುಗಳು ಅವರ ಮುಂದೆ ಬರುತ್ತಿದ್ದವಂತೆ.ದ್ರಾವಿಡ ನಾಡು ನನ್ನ ಸಹಿಯಲ್ಲಿದೆ ಎಂದು ತನ್ನ ಆಪ್ತರಿಗೆ ಹೇಳುತ್ತಿದ್ದರಂತೆ. ಸಹಿಯಲ್ಲಿನ ವಿ ಆಕಾರದ ತಿರುವು ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ.
ಸಹಿಯ ಕೆಳಗಿನ ತಿರುವು ಶ್ರೀಲಂಕಾವನ್ನು ಪ್ರತಿನಿಧಿಸುತ್ತದೆ ಎಂದು ಕೂಡ ಅವರು ಹೇಳುತ್ತಿದ್ದರು. ಹಲವು ದಶಕಗಳ ಹಿಂದೆ ಅವರು ತಿರುಚಿ ಜೈಲಿನಲ್ಲಿದ್ದಾಗ ಈ ರೀತಿ ವಿಶೇಷ ಸಹಿ ಮಾಡಲು ಆರು ತಿಂಗಳು ಸತತ ಅಭ್ಯಾಸ ಮಾಡಿದ್ದರಂತೆ.

Comments are closed.