ಚೆನ್ನೈ: “ಎಂದಿಗೂ ವಿಶ್ರಾಂತಿ ಪಡೆಯದವನು ಈಗ ಚಿರ ನಿದ್ರೆಗೆ ಜಾರಿದ್ದಾನೆ”. ಈ ಸಂದೇಶ ತಮಿಳುನಾಡಿನ ಆರಾಧ್ಯದೈವ ಕರುಣಾನಿಧಿ ಚಿರ ವಿಶ್ರಾಂತಿ ಪಡೆಯಲು ಮಲಗುವ ಶವಪೆಟ್ಟಿಗೆಯ ಮೇಲಿದ್ದ ಪದಗಳು. ಈ ಪದಗಳನ್ನು 30 ವರ್ಷಗಳ ಹಿಂದೆಯೇ ಕಲೈಂಗರ್ ತನ್ನ ಸಮಾಧಿ ಮೇಲೆ ಬರೆಸಲು ಆರಿಸಿಕೊಂಡಿದ್ದರು.
ಕವಿತೆ ಮತ್ತು ಸಾಹಿತ್ಯದ ಜೊತೆಗೆ ಪ್ರೇಮ ಪ್ರಕರಣಗಳಿಗೆ ಹೆಸರುವಾಸಿಯಾಗಿದ್ದ ಕಲೈಂಗರ್ ಅವರ ಈ ಸಂದೇಶವು ಅವರ ಬದುಕಿನ ತಿರುಳನ್ನು ತಿಳಿಸುತ್ತದೆ. ಇಂತಹ ಧೀಮಂತ ನಾಯಕ ಬದುಕಿನುದ್ದಕ್ಕೂ ಹೋರಾಟ ನಡೆಸಿ ಈಗ ಚಿರನಿದ್ರೆಗೆ ಜಾರಿದ್ದಾನೆ.
ದ್ರಾವಿಡ ಚಳುವಳಿಯ ಕಡೆಯ ಕೊಂಡಿಯಾದ ಕರುಣಾನಿಧಿ ಅವರನ್ನು ಮರೀನಾ ಕಡಲ ತೀರದ ಬಳಿ ಸಮಾಧಿ ಮಾಡಲಾಗುತ್ತಿದೆ. ಅಲ್ಲಿ ಈಗಾಗಲೇ ಸಿ.ಎನ್. ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್ ಮತ್ತು ಜೆ.ಜಯಲಲಿತಾ ಅವರ ಸಮಾಧಿಗಳಿವೆ.
ಈಗಾಗಲೇ ಮರೀನಾ ಬೀಚ್ನತ್ತ ಕರುಣಾನಿಧಿ ಪಾರ್ಥಿವ ಶರೀರ ಮೆರವಣಿಗೆ ಮೂಲಕ ಸಾಗುತಲಿದ್ದು, ತಮಿಳುನಾಡಿನಾದ್ಯಂತ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಅಭಿಮಾನಿಗಳು ರಸ್ತೆಬದಿಯಲ್ಲಿ ಕಿಕ್ಕಿರಿದಿದ್ದಾರೆ. ಮರೀನಾ ಬೀಚ್ ಬಳಿ ಅಣ್ಣಾದೊರೈ ಸಮಾಧಿಯ ಬಳಿ ಕರುಣಾನಿಧಿ ಅವರ ಮೃತದೇಹವನ್ನು ಹೂಳಲಾಗುತ್ತದೆ.
ಕರುಣಾನಿಧಿ ಮೃತದೇಹವನ್ನು ಇರಿಸುವ ಶವಪೆಟ್ಟಿಗೆ ಮೇಲೆ ತಮಿಳಿನಲ್ಲಿ ಈ ಪದಗಳನ್ನು ಕೆತ್ತಲಾಗಿದೆ. ಜೀವನದಲ್ಲಿ ಎಂದಿಗೂ ವಿಶ್ರಾಂತಿ ಪಡೆಯದೆ ಕಷ್ಟಪಟ್ಟು ಕೆಲಸ ಮಾಡಿದವನು ಈಗ ಇಲ್ಲಿ ನೆಮ್ಮದಿಯಾಗಿ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಬರೆಯಲಾಗಿದೆ.
Comments are closed.